ಬಸವಕಲ್ಯಾಣ ನಗರದಲ್ಲಿ ಸಂಚಾರಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ, ಸಿದ್ದೇಶ್ವರ ಮತ್ತು ಸಿಬ್ಬಂದಿರವರೊಂದಿಗೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಸವಕಲ್ಯಾಣದ ಗುಡ್ಸ್ ಆಟೋ ವಾಹನ ಮತ್ತು ಲಾರಿ ಚಾಲಕರಿಗೆ ಅರಿವು ಮೂಡಿಸಿರುತ್ತಾರೆ.
ಬಸವಕಲ್ಯಾಣ ಸಂಚಾರಿ ಪೊಲೀಸರು “ನಿಮ್ಮ ಕುಟುಂಬವನ್ನು ಉಳಿಸಲು ನಿಮ್ಮನ್ನು ಉಳಿಸಿ” (save your self to save your family) ವಾಕ್ಯದೊಂದಿಗೆ ಜಿಲ್ಲೆಯಲ್ಲಿ ಅಪಘಾತದ ಪ್ರಮಾಣ ಇಳಿಸುವ ನಿಟ್ಟಿನಲ್ಲಿ ಸದಾ ಪ್ರಯತ್ನಿಸುತ್ತಿದ್ದು, ಬಸವಕಲ್ಯಾಣ ಸಂಚಾರಿ ಪೊಲೀಸ್ ರ ಪ್ರಯತ್ನವು ಪ್ರಸಂಶನಿಯವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಸಹಕರಿಸಲು ಕೋರಲಾಗಿದೆ









