ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಂಟನೇ ಬ್ಲಾಕ್ ನ ಸಂಗಮ ಸರ್ಕಲ್ ನಲ್ಲಿ ವಾಸವಿರುವ ಪಿರಿಯಾದುದಾರರು ಜಯನಗರ ಪೊಲೀಸ್ ಠಾಣೆಯಲ್ಲಿ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ಕಳುವ ಆಗಿರುವ ಬಗ್ಗೆ ದೂರನ್ನು ದಾಖಲಿಸಿರುತ್ತಾರೆ
ದೂರಿನಲ್ಲಿ ಪಿರ್ಯಾದುದಾರರು ಬಿಸಿನೆಸ್ ಮಾಡಿಕೊಂಡಿದ್ದು ಅವರ ವಾಸದ ಮನೆಯ ಕೊಠಡಿಯೊಂದರಲ್ಲಿ ಕಚೇರಿಯನ್ನು ಸ್ಥಾಪಿಸಿದ್ದು ಆ ಕಚೇರಿಯಲ್ಲಿ ಓರ್ವ ವ್ಯವಸ್ಥಾಪಕನು 20 ವರ್ಷದಿಂದ ಬಿಸಿನೆಸ್ ನ ವ್ಯವಹಾರದ ಕೆಲಸವನ್ನು ನೋಡಿಕೊಳ್ಳುತ್ತಿದ್ದನು.
ಕಚೇರಿಯಲ್ಲಿ ವ್ಯವಸ್ಥಾಪಕನಾಗಿರುವ ವ್ಯಕ್ತಿಯ ಮೇಲೆ ಅನುಮಾನವಿರುವುದಾಗಿ ಪಿರಿಯಾಗದಾರರು ತಿಳಿಸಿದ್ದು ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಕಳೆವು ಪ್ರಕರಣ ದಾಖಲಾಗುತ್ತದೆ
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ವಿವಿದಾಯಮಗಳಲ್ಲಿ ತನಿಖೆಯನ್ನು ಕೈಗೊಂಡು ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಪಿರ್ಯಾದುದಾರರ ಮನೆಯಲ್ಲಿ 7,000 ನಗದು ಹಾಗೂ ಕಬೋರ್ಡ್ ನಕಲಿ ಕಿ ಸಮೇತ ವಶಕ್ಕೆ ಪಡೆದುಕೊಂಡ ಪೊಲೀಸರು ಸುಧೀರ್ಘವಾಗಿ ವಿಚಾರಣೆಗೊಳ ಪಡಿಸಲಾಗಿ ಚಿನ್ನಾಭರಣ ಹಾಗೂ ನಗದನ್ನು ಕಳುವು ಮಾಡಿರುವುದಾಗಿ ಆರೋಪಿಯು ಒಪ್ಪಿಕೊಂಡಿರುತ್ತಾನೆ

ಸುಧೀರ್ಘವಾಗಿ ವಿಚಾರಣಪಡಿಸಿದ ಪೊಲೀಸರು ಆರೋಪಿಯು ಸ್ನೇಹಿತರ ಬಳಿ ಹೆಚ್ಚಿನ ಸಾಲವನ್ನು ಮಾಡಿಕೊಂಡಿದ್ದು ಸಾಲವನ್ನು ತೀರಿಸುವ ಸಲುವಾಗಿ ಎಂಟು ವರ್ಷಗಳ ಹಿಂದೆ ಪಿರಿಯಾದಾರರ ಮನೆಯಲ್ಲಿರುವ ಕಬೋರ್ಡ್ ಕೀ ಯನ್ನು ಪಿರಿಯಾದುದಾರರ ಗಮನಕ್ಕೆ ಬರದಂತೆ ತೆಗೆದುಕೊಂಡು ನಕಲಿಕಿ ಎಂದು ಮಾಡಿಸಿಕೊಂಡು ಪಿರಿಯಾದುದಾರರು ಮತ್ತು ಕುಟುಂಬದವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಕಬೋರ್ಡನ್ನು ತೆರೆದು ಕಬೋರ್ಡ್ ನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ನಗದನ್ನು ಕಳುವು ಮಾಡಿರುವುದಾಗಿ ಹಾಗೂ ಕಳವು ಮಾಡಿದ ಚಿನ್ನಾಭರಣಗಳನ್ನು ತ್ಯಾಗರಾಜನಗರದಲ್ಲಿರುವ ಜುವೆಲರಿ ಅಂಗಡಿ ಮತ್ತು ಮಣಪ್ಪುರಂ ಫೈನಾನ್ಸ್ ಕಂಪನಿಯಲ್ಲಿ ಅಡಮಾನ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ ಹಾಗೂ ಚಿನ್ನಾಭರಣವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಬೆಳ್ಳಿಯ ವಸ್ತುವನ್ನು ಖರೀದಿಸಿದ್ದಾಗಿ ಆರೋಪಿಯು ತಿಳಿಸಿರುತ್ತಾನೆ
ಆರೋಪಿಯು ನೀಡಿದ ಮಾಹಿತಿ ಮೇರೆಗೆ ತ್ಯಾಗರಾಜನಗರದ ಜುವೆಲರಿ ಅಂಗಡಿ ಹಾಗೂ ಮಣಪ್ಪುರಂ ಫೈನಾನ್ಸ್ ಕಂಪನಿಯಲ್ಲಿ ಅಡಮಾನ ಮಾರಾಟ ಮಾಡಿದ್ದ 90 ಲಕ್ಷ ಮೌಲ್ಯದ ಒಂದು ಕೆಜಿ 40 ಗ್ರಾಂ ಚಿನ್ನಾಭರಣ ಹಾಗೂ ಆರೋಪಿ ವಾಸದ ಮನೆಯಲ್ಲಿದ್ದ ಒಂದು ಕೆಜಿ ಬೆಲೆಯ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡರು
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲೋಕೇಶ್ ಬರಮಪ್ಪ ಜಗಳಾಸರ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ನಾರಾಯಣಸ್ವಾಮಿ, ವಿ ರವರ ನೇತೃತ್ವದಲ್ಲಿ ಹಾಗೂ ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ಆರ್ ಇತರೆ ಅಧಿಕಾರಿ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









