ಕೋಲಾರ ಭಾಗದ ಬಡ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಜೀವನ ರೂಪಿಸಿಕೊಳ್ಳುವುದಕ್ಕೆ ಉತ್ತಮ ಅವಕಾಶ ಈ ನಿಮ್ಮ ಡಿ ಎಂ ಆರ್ ಫೌಂಡೇಶನ್.
ಇತ್ತೀಚಿಗೆ ಯುವಕರು ಯುವತಿಯರು ಡಿಗ್ರಿ ಆದ ಮೇಲೆ ಏನೂ ಮಾಡೋದು ಮುಂದೆ ಓದುವುದೋ ಅಥವಾ ಕೆಲಸಕ್ಕೆ ಹೋಗೋದು ತಿಳಿಯದೆ ಇರುತ್ತಾರೆ. ಮುಂದಿನ ಭವಿಷ್ಯ ನಮ್ಮ ಕೈಯಲ್ಲಿ ಇರುತ್ತೆ. ನೊಂದವರಿಗೆ ಸಹಾಯ ಮಾಡಲು, ಬಡವರಿಗೆ ನಾವಿದ್ದೇವೆ ಎಂದು ಹೇಳಬಹುದು ಅಷ್ಟೇ ಯಾವುದನ್ನೂ ಅವರಿಗೆ ನಾವು ಮಾಡಲು ಸಾಧ್ಯವಿಲ್ಲ ಕಾರಣ ಸಹಾಯ ಮಾಡಲು ಮನಸ್ಸಿದ್ದರೆ ಸಾಲದು ಅಧಿಕಾರ ಬೇಕು, ಅಧಿಕಾರ ಬೇಕು ಎಂದರೆ ಯು. ಪಿ. ಎಸ್. ಸಿ, ಕೆಪಿಎಸ್, ಐಪಿಎಸ್, ಐಎಎಸ್ ಓದಬೇಕು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಾಸ್ ಆಗಿ ನಮ್ಮ ದೇಶಕ್ಕೆ, ನಮ್ಮ ನಾಡಿಗೆ ನಮ್ಮ ಊರಿಗೆ ಒಳ್ಳೇದು ಮಾಡುವ ಅಧಿಕಾರಿ ಆಗಬೇಕು.. ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಅವಕಾಶ ಕೊಟ್ಟು ಸಮಾಜಕ್ಕೆ ಮಾದರಿ ಆಗಲು ಇನ್ನೊಬ್ಬರಿಗೆ ಪ್ರೇರಣೆಯಾಗಲು ನೀವು ಮನಸ್ಸು ಮಾಡಿ ಕಷ್ಟ ಪಟ್ಟು ಓದಬೇಕು. ಆಯ್ಕೆ ಇದೆ ನಿಮ್ಮ ಕೈ ಅಲ್ಲಿ ಎಂದು ಅಧಿಕಾರಿಗಳು ತಿಳಿಸಿದರು.
ಕೋಲಾರ ಶ್ರೀ ಟಿ ಚನ್ನಯ್ಯ ರಂಗಮಂದಿರದಲ್ಲಿ ನಡೆದ ಜಿಲ್ಲಾಡಳಿತ ಮತ್ತು ಡಿಎಂಆರ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದಂತಹ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಕುರಿತಾದ ಮಾಹಿತಿಯನ್ನು ಡಿಎಂಆರ್ ಫೌಂಡೇಶನ್ ನ ಸ್ಥಾಪಕರು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಿ ದೇವರಾಜ ರವರು ಮತ್ತು ಕೋಲಾರ ಜಿಲ್ಲಾ ವರಿಷ್ಠಾಧಿಕಾರಿಗಳಾದ ನಿಖಿಲ್ ರವರು ಮತ್ತು ಕೋಲಾರ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷಾ ರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿಗಳನ್ನು ನೀಡಿದರು.
ಡಿಸಿಪಿ ದೇವರಾಜ್ ಮಾತನಾಡಿ ಕೋಲಾರದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ದೂರದ ನಗರಗಳಲ್ಲಿ ಲಕ್ಷಾಂತರ ಹಣ ವೆಚ್ಚ ಮಾಡುವುದನ್ನು ತಡೆಯುವ ಉದ್ದೇಶದಿಂದಲೇ ಈ ನಮ್ಮ ಡಿಎಂಆರ್ ಇನ್ಸ್ಟಿಟ್ಯೂಷನ್ ಸ್ಥಾಪಿಸಿದ್ದು ಹಳ್ಳಿಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಹುದ್ದೆಗಳನ್ನು ಅಲಂಕರಿಸುವ ನಿಟ್ಟಿನಲ್ಲಿ ಉಚಿತವಾಗಿ ತರಗತಿಗಳನ್ನು ನೀಡಲಾಗುತ್ತಿದೆ ಎಂದರು.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಅನೇಕ ಜೀವನ ಪಾಠ ಮತ್ತು ಪೋಷಕರ ಪಡುವ ಕಷ್ಟಗಳು ಮನೆಯ ಪರಿಸ್ಥಿತಿ ಬಗ್ಗೆ ಮನ ತಟ್ಟುವಂತೆ ಎಳೆ ಎಳೆಯಾಗಿ ವಿವರಿಸಿದರೂ ಪ್ರತಿನಿತ್ಯ ದಿನ ಪತ್ರಿಕೆಗಳನ್ನು ಓದುವುದರ ಮುಖಾಂತರ ಒಳ್ಳೆಯ ಮಾಹಿತಿಗಳನ್ನು ತಿಳಿದುಕೊಳ್ಳಬಹುದು ಪ್ರತಿಯೊಬ್ಬರು ದಿನಪತ್ರಿಕೆಗಳನ್ನು ಓದಲೇಬೇಕೆಂದು ತಿಳಿಸಿದರು.
ಯುವಕರು ಯುವತಿಯರು ನಮ್ಮ ದೇಶದ ಮುಂದಿನ ಭವಿಷ್ಯ, ಎಲ್ಲಾ ಸಮುದಾಯದ ವಿದ್ಯರ್ಥಿಗಳು ಅಧಿಕಾರಿಗಳು ಆಗಬೇಕು ಅಷ್ಟೇ.
ವರದಿ : ಆಂಟೋನಿ ಬೇಗೂರು








