ಸಂಪಂಗಿ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಂಟನೇ ಕ್ರಾಸ್ ನಲ್ಲಿರುವ ಜುವೆಲರಿ ಅಂಗಡಿಯ ಮಾಲೀಕರು ದೂರೊಂದನ್ನು ನೀಡಿದ್ದು ದೂರಿನಲ್ಲಿ ಓರ್ವ ವ್ಯಕ್ತಿಯು ಅಂಗಡಿಗೆ ಬಂದು ಚಿನ್ನದ ನಾಣ್ಯವನ್ನು ಖರೀದಿ ಮಾಡುವ ನೆಪದಲ್ಲಿ ವ್ಯಕ್ತಿಯ ಗಮನ ಬೇರೆಡೆಗೆ ಸೆಳೆದು ಚಿನ್ನಾಭರಣಗಳಿದ್ದ ಬಾಕ್ಸ್ ನಿಂದ ಎರಡು ಚಿನ್ನದ ಸರಗಳನ್ನು ಕಳುವು ಮಾಡಿಕೊಂಡು ಹೋಗಿರುವುದಾಗಿ ದೂರನ್ನು ನೀಡಿರುತ್ತಾರೆ
ಪ್ರಕರಣವನ್ನು ದಾಖಲಿಸಿದ ಪೊಲೀಸರು ತನಿಖೆಯನ್ನು ಮುಂದುವರಿಸಿ ವಿವಿಧ ಆಯಾಮಗಳಲ್ಲಿ ಖಚಿತ ಮಾಹಿತಿಯನ್ನು ಕಲೆಹಾಕಿ ಬಾಗಲಕೋಟೆ ಜಿಲ್ಲೆಯ ಇಳಕಲ್ ಬಳಿ ಓರ್ವ ಆರೋಪಿತನನ್ನು ಈ ಪ್ರಕರಣದಲ್ಲಿ ಕಳುವಾಗಿದ್ದ ಚಿನ್ನಾಭರಣಗಳ ಸಮೇತ ವರ್ಷಕ್ಕೆ ಪಡೆದ ಸಂಪಂಗಿ ರಾಮನಗರ ಪೊಲೀಸರು ಸುದೀರ್ಘವಾಗಿ ವಿಚಾರಣೆಗಳು ಪಡಿಸಿ ಈ ಪ್ರಕರಣದಲ್ಲಿ ಚಿನ್ನಾಭರಣಗಳು ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾನೆ
ಆರೋಪಿಯು ಗುಲ್ಬರ್ಗದಿಂದ ಬೆಂಗಳೂರಿಗೆ ಬಂದು ಸಂಪಂಗಿರಾಮನಗರದ ಜ್ಯುವೆಲರಿ ಅಂಗಡಿಯಲ್ಲಿ ಮಾಲೀಕನ ಗಮನ ಬೇರೆಡೆಗೆ ಸೆಳೆದು ಎರಡು ಚಿನ್ನದ ಸರಗಳನ್ನು ಹಾಗೂ ಅದೇ ರೀತಿ ಶ್ರೀರಾಮಪುರದ ಜುವೆಲರಿ ಅಂಗಡಿ ಒಂದರಲ್ಲಿ ಉಂಗುರಗಳ ಹಾಗೂ ಮಾಟಿ ಚೈನ್ ಗಳನ್ನು ಕಳುವು ಮಾಡಿ ಅವುಗಳನ್ನು ಮಾರಾಟ ಮಾಡಲು ಹೋಗುತ್ತಿದ್ದಾಗಿ ಆರೋಪಿಯು ತಿಳಿಸಿರುತ್ತಾನೆ
ಈ ಪ್ರಕರಣದ ಆರೋಪಿಯ ಬಂದನದಿಂದ ಹುಟ್ಟು ಹತ್ತು ಲಕ್ಷ ರೂಪಾಯಿ ಮೌಲ್ಯದ 116 ಗ್ರಾಂ ಚಿನ್ನಾಭರಣಗಳನ್ನು ಸಂಪಂಗಿ ರಾಮನಗರ ಪೊಲೀಸರು ವಶಪಡಿಸಿಕೊಂಡಿರುತ್ತಾರೆ
ಈ ಪ್ರಕರಣದ ಆರೋಪಿಯ ಬಂದನದಿಂದ ಎಸ್ ಆರ್ ನಗರ ಪೊಲೀಸ್ ಠಾಣೆಯ- ಒಂದು
ಶ್ರೀರಾಮಪುರದ ಪೊಲೀಸ್ ಠಾಣೆಯ- ಒಂದು ಗಮನ ಬೇರೆಡೆ ಸೆಳೆದು ಎರಡು ಪ್ರಕರಣಗಳು ಪತ್ತೆ ಆಗಿರುತ್ತವೆ
ಈ ಕಾರ್ಯಾಚರಣೆಯನ್ನು ಕೇಂದ್ರ ವಿಭಾಗದ ಡೀಸಿಪಿ ಹಾಕಿ ಅಕ್ಷಯ್ ಮಚ್ಚೀಂದ್ರ ರವರ ಮಾರ್ಗದರ್ಶನದಲ್ಲಿ ಹಲಸೂರು ಗೇಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರದ ಶಿವಾನಂದ ಚಲವಾದಿ ರವರ ನೇತೃತ್ವದಲ್ಲಿ ಸಂಪಂಗಿರಾಮನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿಕಿರಣ್ ಎಸ್ ಎಸ್ ಹಾಗೂ ಇತರೆ ಅಧಿಕಾರಿಯ ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









