ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ದ್ವಾರಕಾ ನಗರದಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಗಿರಿನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳುವಾಗಿರುವ ಬಗ್ಗೆ ದೂರನ್ನು ಸಲ್ಲಿಸಿರುತ್ತಾರೆ
ದೂರಿನಲ್ಲಿ ದೂರುದಾರರು ಕೊಠಡಿಯಲ್ಲಿದ್ದ ಬಿರುವಿನ ಕೀ ಯನ್ನು ಬೀರುವಿನಲ್ಲಿ ಬಿಟ್ಟು ಬೆಳಗ್ಗೆ ಕೆಲಸದ ನಿಮಿತ್ತ ಹೊರಗಡೆ ಹೋಗಿರುತ್ತಾರೆ. ಮಧ್ಯಾಹ್ನ ವಾಪಸ್ ಬಂದು ನೋಡಿದ ದುರುದಾರರು ಯಾರೋ ಕಳ್ಳರು ಮನೆ ಹಿಂಭಾಗದ ಡೋರ್ ಲಾಕ್ ಅನ್ನು ಮುರಿದು ಬೀರುವಿನಲ್ಲಿ ಇಟ್ಟಿದ್ದ 70 ಗ್ರಾಂ ಚಿನ್ನಾಭರಣ ಮತ್ತು 300 ಗ್ರಾಂ ಬೆಳ್ಳಿ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿದ್ದು ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಹಗಲು ಕಳುವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಗಿರಿನಗರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿ ಮೇರೆಗೆ ಹೊಸ ಕೆರೆಹಳ್ಳಿ ನಂದನವನ ಉದ್ಯಾನದ ಬಳಿ ಮೂವರು ವ್ಯಕ್ತಿಗಳನ್ನು ಹಾಗೂ ಒಂದು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದ ಪೊಲೀಸರು ಆರೋಪಿತರನ್ನು ವಿಚಾರಣೆಗೊಳಪಡಿಸಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹಾಗೂ ಗಿರಿನಗರದ ಮತ್ತೆರಡು ಮನೆಗಳಲ್ಲಿ ಕಳುವು ಮಾಡಿರುವುದಾಗಿ ಆರೋಪಿತರು ತಪ್ಪು ಒಪ್ಪಿಕೊಂಡಿರುತ್ತಾರೆ.
ಸುಧೀರ್ಘವಾಗಿ ಆರೋಪಿತರನ್ನು ವಿಚಾರಣೆಗಳು ಪಡಿಸಿದ ಪೊಲೀಸರು ಕಳು ಮಾಡಿದ ಚಿನ್ನಾಭರಣಗಳನ್ನು ಠಾಣಾಸರಹದ್ದಿನ ಗಿರುವ ಅಂಗಡಿಯಲ್ಲಿ ಅಡಮಾನ ಇಟ್ಟಿರೋದಾಗಿ ಹಾಗೂ ಬೆಳ್ಳಿಯ ನಾಣ್ಯಗಳನ್ನು ಆತನ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿರುತ್ತಾನೆ
ತನಿಖೆಯನ್ನು ಮುಂದುವರಿಸಿದ ಗಿರಿನಗರ ಪೊಲೀಸರು ಗಿರವಿ ಅಂಗಡಿಗಳಿಂದ 96 ಗ್ರಾಮ ಚಿನ್ನಾಭರಣ ಹಾಗೂ ಆರೋಪಿಯ ಸ್ನೇಹಿತರಿಂದ 300 ಗ್ರಾಂ ಬೆಳ್ಳಿಯ ನಾಣ್ಯಗಳನ್ನು ಪೊಲೀಸರು ವಶಪಡಿಸಿಕೊಂಡರು
ಈ ಪ್ರಕರಣದ ಆರೋಪಿಗಳ ಬಂದನದಿಂದ 10 ಲಕ್ಷ ಮೌಲ್ಯದ 96 ಗ್ರಾಂ ಚಿನ್ನಾಭರಣ 300 ಗ್ರಾಂ ಬೆಳ್ಳಿಯ ನಾಣ್ಯಗಳು ವಶಪಡಿಸಿ ಕೊಂಡರು ಹಾಗೂ ಗಿರಿನಗರ ಪೊಲೀಸ್ ಠಾಣೆಯ ಮೂರು ಮನೆ ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಒಂದು ಕಾರ್ಯಾಚರಣೆಯಲ್ಲಿ ದಕ್ಷಿಣ ವಿಭಾಗದ ಉಪಪ ಪೊಲೀಸ್ ಆಯುಕ್ತರದ ಲೋಕೇಶ್ ಬರಮಪ್ಪ ಜಗಳ ಸರ್ ಹಾಗೂ ವಿ ವಿ ಪುರಮ್ ಎಸಿಪಿ ಶಾಮಿದ್ ಭಾಷಾ ರವರ ಮಾರ್ಗದರ್ಶನದಲ್ಲಿ ಗಿರಿನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸತೀಶ್ ಕುಮಾರ್ ಯು ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ
ಶಶಿಕುಮಾರ್ ವಿ
ನಮ್ಮ ಪೊಲೀಸ್ ನ್ಯೂಸ್









