ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಜಯನಗರ 2ನೇ ಬ್ಲಾಕ್ನಲ್ಲಿ ಫಿರಾದುದಾರರು ಆಡಿಟ್ ಆಫೀಸ್ನ್ನು ಇಟ್ಟುಕೊಂಡಿರುತ್ತಾರೆ. ಈ ಆಡಿಟ್ ಆಫೀಸ್ನಲ್ಲಿ ಸಿಬ್ಬಂದಿಗಳು ಹಾಗೂ ಸೆಕ್ಯೂರಿಟಿ ಗಾರ್ಡ್ ಸಹ ಇರುತ್ತಾರೆ. ಫಿರಾದುದಾರರು ದಿನಾಂಕ:22/09/2024 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ಅಡಿಟ್ ಆಫೀಸ್ ಇಟ್ಟುಕೊಂಡಿದ್ದು, ಅದೇ ಅಫೀಸ್ನಲ್ಲಿ ಓರ್ವ ವ್ಯಕ್ತಿಯು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿರುತ್ತಾನೆ. ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿರುವಾಗ ಫಿರಾದುದಾರರ ಚಲನ ವಲನವನ್ನು ತಿಳಿದುಕೊಂಡು, ದಿನಾಂಕ:20/09/2024 ರಂದು ಬೆಳಗ್ಗೆ ಆಫೀಸ್ನ ಕ್ಯಾಬಿನ್ನಲ್ಲಿರುವ ಡ್ರಾದಲ್ಲಿ ಫಿರಾದುದಾರರು ಇಟ್ಟಿದ್ದ 10,95,000/- ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾನೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:26/09/2024 ರಂದು ಸಂಜೆ ಬಾಣಸವಾಡಿಯ ಕಸ್ತೂರಿನಗರದ ಔಟರ್ ರಿಂಗ್ ರಸ್ತೆಯ ಟೀ ಹೋಟೆಲ್ ಹತ್ತಿರ ಓರ್ವ ವ್ಯಕ್ತಿಯನ್ನು ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ತ 10,95,000/- ನಗದು ಹಣವನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ಒಂದು
ವಶಕ್ಕೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಆಡಿಟ್ ಆಫೀಸ್ನಲ್ಲಿ ಕಳವು ಮಾಡಿದ ಹಣದಲ್ಲಿ ಆರೋಪಿಯು -ಹುಂಡೈ ಕಾರನ್ನು ಖರೀದಿಸಿದ್ದು, ಅಲ್ಲದೆ 2-ಚಿನ್ನದ ಉಂಗುರ, 1-ಚಿನ್ನದ ಬ್ರಾಸ್ ಲೆಟ್, 1-ಚಿನ್ನದ ಚೈನ್, 1-ಫಾಸ್ಟ್ ಟ್ರ್ಯಾಕ್ ಕೈ ಗಡಿಯಾರ, 1-ವಿವೋ ಮೊಬೈಲ್ ಫೋನ್ನ್ನು ಖರೀದಿಸಿ ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿರುವುದಾಗಿ ತಿಳಿಸಿರುತ್ತಾನೆ. ಇವುಗಳ ಮೌಲ್ಯ 1 5,84,000/-, ಆರೋಪಿಯ ವಶದಲ್ಲಿದ್ದ ಕಾರನ್ನು ಪರಿಶೀಲಿಸಲಾಗಿ ಕಾರಿನ ಡಿಕ್ಕಿಯಟ್ಟಿದ್ದ ನಗದು ಹಣ 3,50,000/-(ಮೂರು ಲಕ್ಷದ ಐವತ್ತು ಸಾವಿರ ರೂಪಾಯಿ) ಸಹ ವಶಪಡಿಸಿಕೊಳ್ಳಲಾಯಿತು.
ದಿನಾಂಕ:27/09/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ ಲೊಕೇಶ್ ಭರಮಪ್ಪ ಜಗಲಾಸ ಐ.ಪಿ.ಎಸ್ರವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ನಾರಾಯಣಸ್ವಾಮಿ.ವಿ ರವರ ನೇತೃತ್ವದಲ್ಲಿ, ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಮೋಹನ್ ಡಿ ಪಟೇಲ್ ಮತ್ತು ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶ್ವಿಯಾಗಿರುತ್ತಾರೆ.









