ಹೊಸ ವರ್ಷ ಅಂದರೆ ಮೋಜುಮಸ್ತಿ, ಕುಡಿತ, ಏನೋ ಒಂದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ಪೊಲೀಸ್ ಅಧಿಕಾರಿಗಳುವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ಶ್ರೀ ಎಂ. ಎನ್ ಕರಿಬಸವನ ಗೌಡ ಡೆಪ್ಯೂಟಿ ಪೊಲೀಸ್ ಕಮಿಷನರ್ ( ವಿಧಾನಸೌದ ಸೆಕ್ಯೂರಿಟಿ ) ರವರು ಅರ್ಥಪೂರ್ಣವಾಗಿ 2025 ರನ್ನು ಪ್ರಾರಂಭ ಮಾಡಿದ್ದಾರೆ. ಬೆಂಗಳೂರಿನ ಕಿದ್ವಾಯ ಆಸ್ಪತ್ರೆಗೆ ಭೇಟಿ ನೀಡಿ ಧರ್ಮಶಾಲಾ ವಾರ್ಡಿನಲ್ಲಿರುವ ಕ್ಯಾನ್ಸರ್ ರೋಗದಿಂದ ಚೇತರಿಕೆಯಲ್ಲಿ ಇರುವ ರೋಗಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿ ಅವರಿಗೆ ಧೈರ್ಯ ತುಂಬಿ ಅವರಿಗೆ ಹಣ್ಣುಹಂಪಲುಗಳನ್ನು, ಬಿಸ್ಕತ್ಗಳನ್ನು, ಬನ್ ಗಳನ್ನು ಪ್ರೀತಿಯಿಂದ ಹಂಚಿದರು. ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವೈದ್ಯರು ನೀಡುವ ಔಷಧಿಗಳನ್ನು ತಪ್ಪದೇ ತೆಗೆದುಕೊಳ್ಳಿ ಬೇಗ ಗುಣಮುಖರಾಗಿ ಎಂದು ಹಾರೈಸಿದರು.

ನಂತರ ಬೆಂಗಳೂರಿನ ಶೇಷಾದ್ರಿಪುರಂ ದಿ ಕರ್ನಾಟಕ ವೆಲ್ಫೇರ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಆಶ್ರಯಕೇಂದ್ರಕ್ಕೆ ತೆರಳಿ 30 ಅಂದ ಮಕ್ಕಳನ್ನು ನೋಡಿ ಅವರ ಜೊತೆಗೆ ಸ್ವಲ್ಪ ಸಮಯ ಕಾಲ ಕಳೆದು ಅವರನ್ನು ಪ್ರೀತಿಯಿಂದ ಮಾತಾಡಿಸಿ ಮಕ್ಕಳೊಂದಿಗೆ ಮಗುವಿನ ರೀತಿ ಇದ್ದು ಮುಗ್ಧ ಮಕ್ಕಳ ನಗುವಿನಲ್ಲಿ ಕಳೆದುಹೋದೆ ಎಂದರು. ದೇವರ ಮಕ್ಕಳಿಗೆ ಹಣ್ಣುಹಂಪಲುಗಳನ್ನು, ಬಿಸ್ಕತ್ ಗಳನ್ನು ಜೊತೆಗೆ ವಸತಿ ಶಾಲೆಗೆ ಎರಡು ಕ್ವಿಂಟಲ್ ಅಕ್ಕಿಯನ್ನು ಶ್ರೀ ಕರಿಬಸವನ ಗೌಡ ರವರು ತನ್ನಿಂದ ಆದ ಚಿಕ್ಕಸೇವೆಯನ್ನು ಮಾಡಿದ್ದೇನೆ ಎಂದು ತಿಳಿಸಿದರು.

ಹಬ್ಬಗಳು ಸಂಭ್ರಮ ಏನಾದ್ರು ಇದ್ದಾಗ ಇಂತಹವರೊಂದಿಗೆ ಆಚರಣೆ ಮಾಡಿದಾಗ ಮನಸ್ಸಿಗೆ ಖುಷಿ ಸಿಗುತ್ತೆ ಹಂಚಿಕೊಂಡಾಗ ನಿಜವಾದ ಆಚರಣೆ ಅಷ್ಟೇ ಎಂದು ಹೇಳಿ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು.











