ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಉಪ ವಿಭಾಗದ ಹೊಸಕೋಟೆ ಪೊಲೀಸರು ದರೋಡೆ ಮಾಡಿರುವ ಆರೋಪದ ಮೇಲೆ ನಾಲ್ವರನ್ನು ಬಂಧಿಸಿದ್ದಾರೆ,
ಆರೋಪಿಗಳಾದ ಜಸ್ವಂತ್, ಎಚ್ ಮಹೀಂದ್ರ, ದಿವಾಕರ್, ಸುನಿಲ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು.
ದಿನಾಂಕ 24.01.2025 ರಂದು ಮಧ್ಯರಾತ್ರಿ 12:30 ರಲ್ಲಿ ಗಸ್ತಿನಲ್ಲಿದ್ದ ಹೊಸಕೋಟೆ ಇನ್ಸ್ಪೆಕ್ಟರ್ ಅಶೋಕ್ ಮತ್ತವರ ತಂಡಕ್ಕೆ ಫ್ಯಾಕ್ಟರಿ ಗೇಟ್ ಹತ್ತಿರ ಕೆಲವರು ಹೊಸಕೋಟೆ ಮತ್ತು ಚಿಂತಾಮಣಿ ರಾಜ್ಯ ಹೆದ್ದಾರಿಯಲ್ಲಿ ದರೋಡೆಗೆ ಸಂಚು ಹಾಕುತ್ತಿದ್ದಾರೆ ಎನ್ನುವ ಮಾಹಿತಿ ದೊರಕುತ್ತದೆ,ಈ ಮಾಹಿತಿ ಮೇರೆಗೆ ತಕ್ಷಣ ಕಾರ್ಯಾಚರಣೆಗೆ ಇಳಿದ ಹೊಸಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಅಂದಾಜು 6,00,000/- ಮೌಲ್ಯದ ಒಂದು ಕಾರು 1,50,000/- ಮೌಲ್ಯದ 4 ಮೊಬೈಲ್ ಗಳುಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಲಾಂಗ್ ಮತ್ತು ಕಬ್ಬಿಣದ ರಾಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಹತ್ತು ದಿನಗಳ ಹಿಂದೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿಯ ರಾಜೇಂದ್ರಹಳ್ಳಿಯ ತೋಟದ ಮನೆ ಒಂದರಲ್ಲಿ ರೈತರು ಟೊಮೇಟೊ ಬೆಳೆದು ಮಾರಾಟ ಮಾಡಿ ಮನೆಯಲ್ಲಿ 5 ಲಕ್ಷ ರೂಗಳನ್ನು ಇಟ್ಟುಕೊಂಡಿರುತ್ತಾರೆ ಎಂದು ಅದೇ ಗ್ರಾಮದ ಕುಪೇಂದ್ರ ಎನ್ನುವ ಆತ ಸಂಚುರೂಪಿಸಿ ಮಾಹಿತಿ ನೀಡಿದ್ದ, ಈ ಮಾಹಿತಿ ಮೇರೆಗೆ ಆರೋಪಿತರು ದಿನಾಂಕ 10.01.2025 ರಂದು ರಾತ್ರಿ ಮುಖಕ್ಕೆ ಮಾಸ್ಕ್ ಧರಿಸಿ ಆ ಒಂಟಿ ಮನೆಗೆ ಕಳ್ಳತನಕ್ಕೆ ಹೋಗಿದ್ದರು ಹಾಗೆ ಕಳ್ಳತನಕ್ಕೆ ಹೋಗಿದ್ದವರು ಮನೆಯಲ್ಲಿದ್ದ ವೃದ್ಧರು, ಚಿಕ್ಕ ಮಕ್ಕಳನ್ನು ಕೂಡಿಟ್ಟು ಹೆದರಿಸಿ 207 ಗ್ರಾಂ ಚಿನ್ನಾಭರಣಗಳು ಮತ್ತು 4,50,000/- ನಗದು ಹಣವನ್ನು ದೋಚಿದ್ದಲ್ಲದೆ ಪೊಲೀಸರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಬಂದಿದ್ದರು.
ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಕೃತ್ಯ ನಡೆಸಿರುವುದನ್ನು ಖಚಿತಪಡಿಸಿಕೊಂಡು ದರೋಡೆ ಮಾಡಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ ಮತ್ತು ಅಡಮಾನ ಇಟ್ಟಿದ್ದ, ಕೆ ಆರ್ ಪುರ ಮತ್ತು ದೊಡ್ಡಬಳ್ಳಾಪುರ ಟೌನ್ ನಲ್ಲಿನ ಚಿನ್ನದ ಅಂಗಡಿಗಳಿಂದ ಅಂದಾಜು ರೂ16,00,000/-ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ಸಿ ಕೆ ಬಾಬಾ, ಅಡಿಷನಲ್ ಎಸ್ಪಿ ಕೆ ಎಸ್ ನಾಗರಾಜು, ಅಡಿಷನಲ್ ಎಸ್ಪಿ 2 ನಾಗೇಶ್ ಕುಮಾರ್, ಮತ್ತು ಹೊಸಕೋಟೆ ಉಪವಿಭಾಗದ ಡಿವೈಎಸ್ಪಿ ಶಂಕರ್ ಗೌಡ ಅಣ್ಣ ಸಾಹೇಬ್ ಪಾಟೀಲ್ ರವರುಗಳ ಮಾರ್ಗದರ್ಶನ ಮೇರೆಗೆ
ಹೊಸಕೋಟೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಬಿ ಎಸ್ ಅಶೋಕ್ ರವರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಮುನಿರಾಜು, ಮತ್ತು ಸಂಪತ್ ಕುಮಾರ್ ಹಾಗೂ ಕ್ರೈಂ ಸಿಬ್ಬಂದಿಗಳಾದ ದತ್ತಾತ್ರೇಯ, ನಾಗರಾಜ್, ರಮೇಶ್, ಜೋಯಲ್ ಜೆರಾಲ್ಡ್, ಗೋಪಾಲ್, ಮತ್ತಿವಣ್ಣನ್, ಜಗನ್ನಾಥ್ ಮತ್ತು ತನಿಖಾ ಸಹಾಯಕ ನಾಗರಾಜ್ ಬಕಾಲಿ, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
…ವರದಿ ಶಶಿಕುಮಾರ್









