ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನದಂತೆ, ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಹಿಳಾ ಕಾಣೆ ಪ್ರಕರಣದಲ್ಲಿ ಮಹಿಳೆಯ ಪತ್ತೆ ಹಚ್ಚಲು ಪ್ರಕರಣ ದಾಖಲಾದ ತಕ್ಷಣದಿಂದ ಕಾರ್ಯ ಪ್ರವರ್ತರಾದ ಪಿ.ಎಸ್.ಐ ಶ್ರೀ ಮಹೇಂದ್ರ ಕುಮಾರ ರವರು ವೈಜ್ಞಾನಿಕ ತಂತ್ರಜ್ಞಾನದ ಸಹಾಯ, ಸಿ.ಸಿ. ಟಿ.ವಿ ಆಧಾರದ ಮೇರೆಗೆ ಮತ್ತು ತಮ್ಮ ಪೊಲೀಸ್ ಬಾತ್ಮಿದಾರರಿಂದ ನಿಖರವಾದ ಮಾಹಿತಿ ಪಡೆದುಕೊಂಡು ಕಾಣೆಯಾದ ಮಹಿಳೆಯ ಪತ್ತೆ ಹಚ್ಚಿ ಅವರ ಮನೆರವರಿಗೆ ಒಪ್ಪಿಸಿರುತ್ತಾರೆ. ಕಾಣೆಯಾದ ಮಹಿಳೆಯನ್ನು ಪತ್ತೆ ಹಚ್ಚಿ ಮನೆ ರವರಿಗೆ ಒಪ್ಪಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ. ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ.









