ಆರ್ ಆರ್ ನಗರದ ಪೊಲೀಸ್ ಠಾಣಾ ಸರಹದ್ದಿನ ಬಿಇಎಮ್ಎಲ್ ಐದನೇ ಹಂತದಲ್ಲಿ ವಾಸವಿರುವ ಪಿರಿಯಾದುದಾರರು ಠಾಣೆಗೆ ಹೋಗಿ ಮನೆಯ ಕಳವು ಪ್ರಕರಣವನ್ನು ದಾಖಲಿಸಿರುತ್ತಾರೆ
ಪತ್ನಿಯ ಚಿಕಿತ್ಸೆಗಾಗಿ ಪರಿಚಿತರ ಮನೆಗೆ ಹೋಗಿದ್ದ ಪಿರಿಯಾದುದಾರರು ಮನೆಗೆ ಬಂದು ವಾಪಸ್ ನೋಡಲಾಗಿ ಕೊಠಡಿಯಲ್ಲಿ ಲೈಟ್ ಆನ್ ಆಗಿದ್ದು ಬೀರುವಿನ ಬಾಗಿಲು ತೆರೆದು ಯಾರೋ ಅಪರಿಚಿತರು ಮನೆಯ ಡೋರನ್ನು ಮುರಿದು 55 ಗ್ರಾಂ ಚಿನ್ನಾಭರಣ 3 ಕೆಜಿ 500 ಗ್ರಾಂ ಬೆಳ್ಳಿಯ ವಸ್ತು ಹಾಗೂ ನಗದನ್ನು ಕಳುವು ಮಾಡಿಕೊಂಡಿರುವ ಹೋಗಿರುತ್ತಾರೆಂದು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆ
ಪ್ರಕರಣದ ತನಿಖೆಯನ್ನು ಮುಂದುವರಿಸಿದ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ beml 5ನೇ ಹಂತದ ಎರಡನೇ ಕ್ರಾಸ್ ನಲ್ಲಿ ಒಬ್ಬ ವ್ಯಕ್ತಿಯನ್ನು ವರ್ಷಕ್ಕೆ ಪಡೆದು ಮತ್ತು ರಾಜರಾಜೇಶ್ವರಿ ದೇವಸ್ಥಾನದ ಪಕ್ಕದ ಮನೆಯ ಬಳಿ ಮತ್ತೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ಸುಧೀರ್ಘವಾಗಿ ವಿಚಾರಣೆಗೆ ಒಳಪಡಿಸಿ ಈ ಪ್ರಕರಣದಲ್ಲಿ ಚಿನ್ನಾಭರಣ ಬೆಳ್ಳಿಯ ವಸ್ತುಗಳು ಹಾಗೂ ನಗದನ್ನು ಕಳುವು ಮಾಡಿರುವುದಾಗಿ ಆರೋಪಿಗಳು ತಪ್ಪು ಒಪ್ಪಿಕೊಂಡಿರುತ್ತಾರೆ
ಈ ಒಂದು ಪ್ರಕರಣದಲ್ಲಿ ಕಳುವು ಮಾಡಿದ್ದ ವಸ್ತುಗಳನ್ನು ಬೆಂಗಳೂರು ನಗರದ ನಗರತ್ ಪೇಟೆಯ ಜ್ಯುವೆಲ್ಲರಿ ಅಂಗಡಿಗಳಲ್ಲಿ ಹಾಗೂ ತಮಿಳುನಾಡಿನಲ್ಲಿರುವ ಆರೋಪಿಯ ವಾಸದ ಮನೆಯಲ್ಲಿಟ್ಟಿರುವುದಾಗಿ ತಿಳಿಸಿರುತ್ತಾನೆ
ತನಿಖೆಯನ್ನು ಮುಂದುವರಿಸಿ 59 ಲಕ್ಷ ಮೌಲ್ಯದ 600 ಗ್ರಾಂ ಚಿನ್ನಾಭರಣ 7 ಕೆಜಿ 40ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ರಾಜರಾಜೇಶ್ವರಿ ನಗರ ಪೊಲೀಸರು ವಶಪಡಿಸಿಕೊಂಡರು
ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ 1. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಆರು ಮನೆ ಕಳವು ಪ್ರಕರಣ
- ವಿಜಯನಗರ ಪೊಲೀಸ್ ಠಾಣೆಯ ಒಂದು ಮನೆ ಕಳುವು ಪ್ರಕರಣ
ಒಟ್ಟು ಏಳು ಪ್ರಕರಣಗಳು ಪತ್ತೆಯಾಗಿರುತ್ತವೆ
ಈ ಕಾರ್ಯಾಚರಣೆಯನ್ನು ಚರಣೆಯನ್ನು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ಬ್ಯಾಟರಾಯನಪುರ
ಎಸಿಪಿ ಭರತ್ ಎಸ್ ರೆಡ್ಡಿ ರವರ ಮಾರ್ಗದರ್ಶನದಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಬಿಎಮ್ ಹಾಗೂ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









