ಶಿರಸಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಶಿರಸಿ ಶಹರದ ಬಿಡ್ಡಿಬೈಲ್ ಹತ್ತಿರದ ಟೆಂಪೋ ಸ್ಟಾಂಡ್ ಹತ್ತಿರ ನಿಲ್ಲಿಸಿಟ್ಟಿದ್ದ ಹಿರೋ ಹೊಂಡಾ ಕಂಪನಿಯ ಹಿರೋ HERO SPLENDOR+ 135 ಹೆಸರಿನ ಹೆಸರಿನ ಮೋಟಾರ ಸೈಕಲ ನಂ.KA-31/EF-1993 ನೇದರ ಅ:ಕಿ: 45.000/- ರೂಪಾಯಿ ಬೆಲೆ ಬಾಳುವ ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಶಿರಸಿ ನಗರ ಪೊಲೀಸ್ ಠಾಣಾ ಗುನ್ನಾ ನಂ.46/2025.ಕಲಂ.303(2) ಬಿ.ಎನ್.ಎಸ್.ನೇದರಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ-09-07-2025 ರಂದು ಕಳವು ಪ್ರಕರಣದಲ್ಲಿನ ಆರೋಪಿತನಾದ ಮನೋಜ್ ಬಸಪ್ಪ ವಡ್ಡರ ಪ್ರಾಯ: 29 ವರ್ಷ ಉದ್ಯೋಗ: ಗಾರೆ ಕೆಲಸ ಸಾ॥ ಮನೋಹರ ನಗರ ಕ್ಯಾಸನುರು ರಸ್ತೆ ತಾ-ಹಾನಗಲ್ ಜಿ-ಹಾವೇರಿ. ಈತನಿಗೆ ದಸ್ತಗಿರಿ ಮಾಡಿ. ಈತನಿಂದ ಕಳುವಾದ ಅಂಕಿ: 45,000/- ರೂಪಾಯಿ ಬೆಲೆ ಬಾಳುವ ಮೋಟಾರ ಸೈಕಲನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಹಾಗು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.
ಸದ್ದಿ ಪ್ರಕರಣದ ಪತ್ತೆಗೆ ಮಾನ್ಯ ಶ್ರೀ ಎಮ್. ನಾರಾಯಣ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು. ಉತ್ತರ ಕನ್ನಡ ಜಿಲ್ಲೆ ಕಾರವಾರ, ಮಾನ್ಯ ಶ್ರೀ ಕೃಷ್ಣಮೂರ್ತಿ ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಮಾನ್ಯ ಶ್ರೀ ಜಗದೀಶ ನಾಯ್ಕ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2. ಮಾನ್ಯ ಶ್ರೀಮತಿ ಗೀತಾ ಪಾಟೀಲ್ ಪೊಲೀಸ್ ಉಪಾಧೀಕ್ಷಕರು, ಶಿರಸಿ ಉಪವಿಭಾಗ, ಮತ್ತು ಮಾನ್ಯ ಶ್ರೀ ಶಶಿಕಾಂತ ವರ್ಮಾ ಪೊಲೀಸ್ ವೃತ್ತ ನಿರೀಕ್ಷಕರು. ಶಿರಸಿ ರವರ ಮಾರ್ಗದರ್ಶನದಲ್ಲಿ ಶ್ರೀ ನಾಗಪ್ಪ ಪಿ.ಎಸ್.ಎ(ಕಾ &ಸು) ಶಿರಸಿ ನಗರ ಠಾಣೆ ಹಾಗು ಶ್ರೀ ನಾರಾಯಣ ರಾಠೋಡ ಪಿ.ಎಸ್.ಐ (ತನೀಖೆ) ಶಿರಸಿ ನಗರ ಠಾಣೆ ನೇತೃತ್ವದಲ್ಲಿ ಸಿಬ್ಬಂದಿಯವರಾದ ಹನುಮಂತ ಕಬಾಡಿ ಸಿ.ಎಚ್.ಸಿ-1283. ಪ್ರವೀಣ ಎನ್ ಸಿಪಿಸಿ-889 ಸದ್ದಾಂ ಹಸೇನ್ ಬಿ ಸಿಪಿಸಿ-1203. ಸುನೀಲ್ ಹಡಲಗೆ ಸಿಪಿಸಿ-204 ಬೇಕ್ನಿಕಲ್ ಸೇಲ್ನ ಉದಯ ಗುನಗಾ ಮತ್ತು ಕದಂ ನೇಯರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿತನನ್ನು ಪತ್ತೆ ಮಾಡುವಲ್ಲ ಯಶಸ್ವಿಯಾಗಿರುತ್ತಾರೆ. ಸದ್ರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಯವರಿಗೆ ಮಾನ್ಯ ಶ್ರೀ ಎಮ್. ನಾರಾಯಣ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.









