ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲ ನಗರ ಇಸ್ರೋ ಲೇಔಟ್ ನಲ್ಲಿ ವಾಸವಿರುವ ವ್ಯಕ್ತಿ ಒಬ್ಬರು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮನೆ ಕಳುವಾಗಿರುವ ಬಗ್ಗೆ ದೂರನ್ನು ಸಲ್ಲಿಸಿರುತ್ತಾರೆ
ಫ್ಲ್ಯಾಟ್ ನಲ್ಲಿ ಪೇಂಟಿಂಗ್ ಕೆಲಸ ಮಾಡಲು 4 ವ್ಯಕ್ತಿಗಳನ್ನು ದೂರುದಾರರು ಕರೆಸಿದ್ದು ಆ ನಾಲ್ವರು ವ್ಯಕ್ತಿಗಳು ಪೇಂಟಿಂಗ್ ಕೆಲಸ ಮುಗಿಸಿ ಬೆಳಗಿನ ಜಾವ ಪ್ಲಾಟ್ ನಿಂದ ಹೊರ ಹೋಗಿರುತ್ತಾರೆ ಅದೇ ದಿನ ಸಂಜೆ ದೂರುದಾರರ ಅತ್ತೆ ಹಾಗೂ ಆಕೆಯ ಸ್ನೇಹಿತರು ದೂರುದಾರರು ವಾಸವಿರುವ ಫ್ಲಾಟ್ ಗೆ ಬಂದಿರುತ್ತಾರೆ.
ಪೇಂಟಿಂಗ್ ಕೆಲಸ ಮುಗಿದ ಬಳಿಕ ಫ್ಲಾಟ್ನ ಒಂದು ಕೊಠಡಿಯ ವಾರ್ಡ್ರೋಬ್ ನಲ್ಲಿ ದೂರುದಾರರು 200 ಗ್ರಾಂಚಿನ್ನಾಭರಣಗಳಿರುವ ಬ್ಯಾಗ್ ಒಂದನ್ನು ಇಟ್ಟಿರುತ್ತಾರೆ ಅದೇ ಕೊಠಡಿಯನ್ನು ದೂರುದಾರರ ಅತ್ತೆ ಹಾಗೂ ಆಕೆ ಸ್ನೇಹಿತೆಯೂ ಸ್ವಚ್ಛ ಮಾಡಿ ರಾತ್ರಿ ಅಲ್ಲೇ ಮಲಗಿರುತ್ತಾರೆ
ಪ್ಲಾಟ್ನಲ್ಲಿ ಸ್ವಚ್ಛ ಮಾಡುವ ಕೆಲಸವನ್ನು ಮುಂದುವರಿಸಿದ ಅತ್ತೆಯ ಸ್ನೇಹಿತೆಯ ಗಂಡನು ಫ್ಲಾಟ್ ಗೆ ಬಂದಿದ್ದು ಮನೆಯ ಕ್ಲೀನಿಂಗ್ ಕೆಲಸ ಮುಗಿದ ನಂತರ ದೂರುದಾರರ ಅತ್ತೆ ಹಾಗೂ ಆಕೆಯ ಸ್ನೇಹಿತೆ ಮತ್ತು ಸ್ನೇಹಿತೆ ಗಂಡ ಮೂವರು ಸ್ವಂತ ಊರಾದ ಬಾಗಲಕೋಟೆ ಜಿಲ್ಲೆಯ ಮೆಟ್ಟಗುಡ್ಡ ಗ್ರಾಮಕ್ಕೆ ಹೋಗಿರುತ್ತಾರೆ
ಅದೇ ದಿನ ದೂರುದಾರರು ರಾತ್ರಿ ಪ್ಲಾಟ್ ನ ಲಾಕ್ ಮಾಡಿಕೊಂಡು ಸ್ವಂತ ಊರಾದ ಗದಗ ಜಿಲ್ಲೆಗೆ ಹೋಗಿರುತ್ತಾರೆ. ನಂತರ ದೂರುದಾರರು ವಾಪಸ್ ಫ್ಲಾಟ್ ಗೆ ಬಂದು ಕೊಠಡಿಯ ವಾರ್ಡ್ರೋಬ್ ನಲ್ಲಿ ನಲ್ಲಿಟ್ಟಿದ್ದ ಚಿನ್ನಾಭರಣಗಳಿದ್ದ ಬ್ಯಾಗನ್ನು ನೋಡಿದ ದೂರುದಾರರು ಬ್ಯಾಗಲ್ಲಿಟ್ಟಿದ್ದ 200 ಗ್ರಾಂಚಿನ್ನಾಭರಣಗಳು ಕಳು ವಾಗಿರುತ್ತದೆ
ಈ ಕುರಿತು ಅತ್ತೆ ಹಾಗೂ ಆಕೆ ಸ್ನೇಹಿತೆಯ ಮೇಲೆ ಅನುಮಾನ ಬಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮನೆಕಳು ಪ್ರಕರಣವನ್ನು ದಾಖಲಿಸಿರುತ್ತಾರೆ
ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಾಗಲಕೋಟೆ ಜಿಲ್ಲೆಯ ಮೆಟಗುಡ್ಡ ಗ್ರಾಮದಲ್ಲಿ ದೂರುದಾರರ ಅತ್ತೆಯ ಸ್ನೇಹಿತೆಯನ್ನು ವಶಕ್ಕೆ ಪಡೆದ ಪೊಲೀಸರು ವಿವಿಧಾಯಮಗಳಲ್ಲಿ ವಿಚಾರಣೆಗೊಳಪಡಿಸಿ ಚಿನ್ನಾಭರಣಗಳನ್ನು ಕಳುವು ಮಾಡಿರುವುದಾಗಿ ಆರೋಪಿತೆಯು ತಪ್ಪು ಒಪ್ಪಿಕೊಂಡಿರುತ್ತಾಳೆ
ಆರೋಪಿತೆಯನ್ನು ಸುಧೀರ್ಘಾ ವಾಗಿ ವಿಚಾರಣೆ ಗೆ ಒಳಪಡಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಳು ಮಾಡಿದ ಚಿನ್ನಾಭರಣಗಳನ್ನು ಆಕೆ ಗಂಡನಿಗೆ ನೀಡಿರುವುದಾಗಿ ಆರೋಪಿತೆಯು ತಿಳಿಸಿರುತ್ತಾಳೆ ಆರೋಪಿತೆಯ ಗಂಡನು 114 ಗ್ರಾಂ ಚಿನ್ನಾಭರಣಗಳನ್ನು ಠಾಣೆಗೆ ತಂದು ವಾಪಸ್ ನೀಡಿದ್ದು ಇವುಗಳ ಒಟ್ಟು ಮೌಲ್ಯ 10 ಲಕ್ಷರೂಪಾಯಿಗಳಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ನೈರುತ್ಯ ವಿಭಾಗದ ಉಪಪ ಪೊಲೀಸ್ ಆಯುಕ್ತರಾದ ಅನಿತಾ ಬಿ ಅದ್ದಣ್ಣನವರ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಎಸಿಪಿ ಸ್ಬಿ ಗಿರೀಶ್ ರವರ ನೇತೃತ್ವದಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ಆರ್ ಹಾಗೂ ಇತರೆ ಅಧಿಕಾರಿಗಳ ಸಿಬ್ಬಂದಿ ತಂಡ ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ
ಶಶಿಕುಮಾರ್ ವಿ
ನಮ್ಮ ಪೊಲೀಸ್ ನ್ಯೂಸ್









