1,48,36,500/- ನಗದು ಹಾಗೂ ಒಂದು ದ್ವಿ-ಚಕ್ರ ವಾಹನ ವಶ.
ವೈಯಾಲಿಕಾವಲ್ ಪೊಲೀಸ್ ಠಾಣಾ ಸರಹದ್ದಿನ ಕೋದಂಡರಾಯಪುರದಲ್ಲಿ ಚಾರ್ಟೆಡ್ ಅಕೌಂಟೆಂಟ್ ಕಛೇರಿಯಿಟ್ಟಿಕೊಂಡಿರುವ ಪಿರ್ಯಾದುದಾರರು ದಿನಾಂಕ:06/05/2025 ರಂದು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ತಮ್ಮ ಕಾರು ಚಾಲಕನಿಗೆ, ತಮ್ಮ ಗ್ರಾಹಕರ ಟ್ಯಾಕ್ಸ್ ತುಂಬುವ ಹಣವಾದ 1,51,00,000/- (ಒಂದು ಕೋಟಿ ಐವತ್ತೊಂದು ಲಕ್ಷ) ರೂಪಾಯಿಗಳನ್ನು ಬ್ಯಾಂಕ್ಗೆ ಸಂದಾಯ ಮಾಡುವ ಸಲುವಾಗಿ ಕಾರಿನಲ್ಲಿಡಲು ನೀಡಿದ್ದು, ಚಾಲಕನು ಹಣವನ್ನು ಕಾರಿನಲ್ಲಿಡದೇ, ಆತನ ದ್ವಿ-ಚಕ್ರ ವಾಹನದಲ್ಲಿಟ್ಟುಕೊಂಡು ಪರಾರಿಯಾಗಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು. ಪಿರ್ಯಾದುದಾರರ ಮನೆಯಲ್ಲಿ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಗೆ ನೋಟಿಸ್ ಜಾರಿ ಮಾಡಿದ್ದು, ಕಾರು ಚಾಲಕನು ದಿನಾಂಕ:09/05/2025 ರಂದು ಠಾಣೆಗೆ ಹಾಜರಾಗಿರುತ್ತಾನೆ. ಠಾಣೆಗೆ ಹಾಜರಾದ ಕಾರು ಚಾಲಕನನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ನಗದನ್ನು ಕಳುವು ಮಾಡಿರುವುದಾಗಿ ತಪ್ರೊಪ್ಪಿಕೊಂಡಿರುತ್ತಾನೆ. ಹಾಗೂ ಪ್ರಕರಣದಲ್ಲಿ ಕಳುವು ಮಾಡಿದ್ದ ನಗದನ್ನು ಟಿ.ಟಿ.ಡಿ ದೇವಸ್ಥಾನದ ಬಳಿಯಿರುವ ಆತನ ವಾಸದ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದು, ಅದೇ ದಿನ ಆರೋಪಿಯು ವಾಸಿಸುವ ವಾಸದ ಮನೆಯಿಂದ * 1.48.36.500/– (ಒಂದು ಕೋಟಿ ನಲವತ್ತೆಂಟು ಲಕ್ಷ ಮೂವತ್ತಾರು ಸಾವಿರದ ಐದುನೂರು ರೂಪಾಯಿ)ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಯ ಬಂಧನದಿಂದ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯ ಒಂದು ಕಳವು ಪ್ರಕರಣ ಪತ್ತೆಯಾಗಿರುತ್ತದೆ.
ದಿನಾಂಕ:10/05/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಶೇಖರ್ ಹೆಚ್.ಟಿ. ಐ.ಪಿ.ಎಸ್ ಶೇಷಾದ್ರಿಪುರಂ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಪ್ರಕಾಶ್.ಆರ್. ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಮತ್ತು ವೈಯಾಲಿಕಾವಲ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಶಂಕರಗೌಡ ಬಸನಗೌಡರ ರವರು ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ









