ಬೀದರದ ದೀನ ದಯಾಳ ಕಾಲೋನಿಯಲ್ಲಿ ನಾರ್ಕೋಟಿಕ್ ಅಂಶ ಇರುವ ಔಷಧಿ ಬಾಟಲಗಳು ಮತ್ತು ಮಾತ್ರೆಗಳನ್ನು ಕಾಲೋನಿಯಲ್ಲಿ ಸರಕಾರದಿಂದ ಯಾವುದೇ ಪರವಾನಿಗೆ ಇರಲಾರದೆ ಅಕ್ರಮವಾಗಿ 357 ಗ್ರಾಂ ಗಾಂಜಾ ಮತ್ತು ನಶೇ ಬರಿಸುವ ಔಷಧಿ, ಗುಳಿಗೆಗಳನ್ನು ಸಗ್ರಹ ಮಾಡಿ ಮಾರಾಟ ಮಾಡುತ್ತಿರುವ ಮಾಹಿತಿಯಂತೆ ಬೀದರ್ ಸೈಬರ್ ಅಪರಾಧ ( ಸಿ.ಇ.ಎನ್) ಪೊಲೀಸ್ ಠಾಣೆಯ ಪಿ.ಐ ಶ್ರೀ, ಶಿವಾನಂದ ಗಾಣಿಗೇರ ರವರು ತಮ್ಮ ಸಿಬ್ಬಂದಿರವರಾದ ಶ್ರೀ ಅರುಣ ಪಾಟೀಲ್, ಶ್ರೀ ಮಲ್ಲಿಕಾರ್ಜುನ ಪಾಟೀಲ್, ಶ್ರೀ ಶಿವಕುಮಾರ, ಶ್ರೀ ಮಲ್ಲಿನಾಥ, ಶ್ರೀ ಪ್ರಶಾಂತ್ ರೆಡ್ಡಿ, ಶ್ರೀ ಸಿದ್ರಾಮ್, ಮಾರ್ಕೇಟ್ ಪೊಲೀಸ್ ಠಾಣೆಯ ಶ್ರೀಮತಿ ಅನಿತಾ, ಮ.ಎ.ಎಸ್.ಐ, ಶ್ರೀ ಸಂಗನ ಬಸವ ರವರನ್ನೊಳಗಂಡ ತಂಡವು ದಾಳಿ ಮಾಡಿ 357 gm ಗಾಂಜಾ, 174 ಗುಳಿಗೆಗಳು, 100 ml ನ 169. ಬಾಟಲಗಳನ್ನು ವಶ ಪಡಿಸಿಕೊಂಡು ಆರೋಪಿತರಿಂದ 3 ಮೊಬೈಲ್ ಮತ್ತು ಒಂದು ದ್ವಿಚಕ್ರ ವಾಹನ ಹೀಗೆ ಒಟ್ಟು ಅಃಕಿಃ 54,078=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಮೂರು ಜನ ಆರೋಪಿತರನ್ನು ದಸ್ತಗಿರಿ ಮಾಡಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಶೇ ಬರಿಸುವ ವಸ್ತುಗಳನ್ನು ವಶ ಪಡಿಸಿಕೊಂಡ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಜಿಲ್ಲೆಯನ್ನು ನಶಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ









