ಹೆಬ್ಬಗೋಡಿ ಪೊಲೀಸ್ ಠಾಣಾಸರಹದ್ದಿನ ಆನೇಕಲ್ ತಾಲೂಕಿನ ತಿರು ಪಾಳ್ಯದಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿರುವ ಪಿರಿಯಾದುದಾರರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಒಂದು ದೂರನ್ನು ಸಲ್ಲಿಸಿರುತ್ತಾರೆ
ಪಿರ್ಯಾದುದಾರರ ಪಕ್ಕದ ಮನೆಯವರು ಪಿರಿಯಾದುದಾರರಿಗೆ ಕರೆ ಮಾಡಿ ಮನೆಯ ಮುಂಬಾಗಿಲನ್ನು ಯಾರೋ ಅಪರಿಚಿತರು ಮುರಿದಿರುವುದಾಗಿ ತಿಳಿಸಿರುತ್ತಾರೆ. ಮಾರನೇ ದಿನ ಮನೆಗೆ ಬಂದು ನೋಡಲಾಗಿ ಮನೆಯ ಮುಂಭಾಗಲು ಮುರಿದಿದ್ದು ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಬೆಳ್ಳಿಯ ವಸ್ತುಗಳು ನಗದು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ದೂರನ್ನು ದಾಖಲಿಸಿರುತ್ತಾರೆ
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಹೆಬ್ಬಗೋಡಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆಹಾಕಿ ಪಿರಿಯಾದುದಾರರ ವಾಸವಿರುವ ಪಕ್ಕದ ಬ್ಲಾಕ್ ನ ಹತ್ತಿರ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ಆತನು ಪಕ್ಕದ ಬ್ಲಾಕ್ ನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿರುವುದಾಗಿ ಮತ್ತು ಈ ಕೃತ್ಯ ಎಸಗಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾನೆ
ಕಳುವು ಮಾಡಿದ ಚಿನ್ನಾಭರಣ ವಜ್ರದ ಆಭರಣಗಳು ಬೆಳ್ಳಿಯ ವಸ್ತುಗಳು ನಗದನ್ನು ಆತನು ವಾಸವಿರುವ ಅಪಾರ್ಟ್ಮೆಂಟ್ನಲ್ಲಿ ಇಟ್ಟಿರುವುದಾಗಿ ಆರೋಪಿಯು ತಿಳಿಸಿರುತ್ತಾನೆ
ಆತನ ಅಪಾರ್ಟ್ಮೆಂಟ್ ಇಂದ 621 ಗ್ರಾಂ ಚಿನ್ನಾಭರಣ 15 ಗ್ರಾಂ ವಜ್ರ 56 ಗ್ರಾಂ ಬೆಳ್ಳಿಯ ವಸ್ತುಗಳು 28,000 ನಗದುವನ್ನು ಪೊಲೀಸರು ವಶಪಡಿಸಿಕೊಂಡರು
ಆರೋಪಿಯ ಬಂಧನದಿಂದ 60 ಲಕ್ಷ 46,000ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು
ಆರೋಪಿಯ ಬಂದನದಿಂದ ಹೆಬ್ಬಗೋಡಿ ಪೊಲೀಸ್ ಠಾಣೆಯ ಮೂರು ಮನೆ ಕನ್ನಕಳುವು ಪ್ರಕರಣಗಳು ಪತ್ತೆಯಾಗಿರುತ್ತದೆ
ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಆಯುಕ್ತರದ ಸಾರಾ ಫಾತಿಮಾ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಸತೀಶ್ ಆರ್ ರವರ ನೇತೃತ್ವದಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸೋಮಶೇಖರ್ ಜಿ ಮತ್ತು ಅಧಿಕಾರಿ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









