ಯಲಹಂಕ ಉಪನಗರ, ಆಡುಗೋಡಿ, ಭಾರತಿನಗರ, ಜಾಲಹಳ್ಳಿ ಹಾಗೂ ಪುಲಿಕೇಶಿನಗರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ. ಗಾಂಜಾ, ಹೈಡೋ ಗಾಂಜಾ, ಹೆರಾಯಿನ್ ಮಾರಾಟ ಮಾಡುತ್ತಿದ ವಿದೇಶದ ಇಬ್ಬರು, ಹೊರರಾಜ್ಯದ ಓರ್ವ ಹಾಗೂ ಸ್ಥಳೀಯ 08 ವ್ಯಕ್ತಿಗಳು ಸೇರಿದಂತೆ ಒಟ್ಟು 11 ವ್ಯಕ್ತಿಗಳ ಬಂಧನ.
2 ಕೆಜಿ 7 ಗ್ರಾಂ ಎಂ ಡಿ ಎಂ ಎ, 31 ಕೆಜಿ 396 ಗ್ರಾಮ್ ಗಾಂಜಾ 220 ಗ್ರಾಂ ಹೈಡ್ರೋ ಗಾಂಜಾ 162 ಗ್ರಾಂ ಹೆರಾಯಿನ್ ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಇದರ ಒಟ್ಟು ಮೌಲ್ಯ 2 ಕೋಟಿ ರೂ. 57 ಲಕ್ಷ ಎಂದು ಅಂದಾಜಿಸಲಾಗಿದೆ ಇದರ ಮಾರುಕಟ್ಟೆ ಮೌಲ್ಯ ಸುಮಾರು 5 ಕೋಟಿ ಎನ್ನಲಾಗಿದೆ
ಯಲಹಂಕ ಉಪನಗರ, ಆಡುಗೋಡಿ, ಭಾರತಿನಗರ, ಜಾಲಹಳ್ಳಿ ಹಾಗೂ ಪುಲಿಕೇಶಿನಗರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಎಂ.ಡಿ.ಎಂ.ಎ. ಗಾಂಜಾ, ಹೈಡೋಗಾಂಜಾ ಮತ್ತು ಹೆರಾಯಿನ್ ಅನ್ನು ಮಾರಾಟ ಮಾಡುತ್ತಿರುವುದಾಗಿ ಭಾತ್ಮೀದಾರರಿಂದ ಅಧಿಕಾರಿ/ಸಿಬ್ಬಂದಿಯವರುಗಳಿಗೆ ವಿವಿಧ ದಿನಾಂಕಗಳಂದು ಖಚಿತ ಮಾಹಿತಿಗಳು ದೊರೆತ್ತಿರುತ್ತವೆ. ಈ ಮಾಹಿತಿಗಳನ್ನಾಧಾರಿಸಿ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ, ಭಾತ್ಮೀದಾರರು ತಿಳಿಸಿದ ಸ್ಥಳಗಳ ಮೇಲೆ ದಾಳಿ ಮಾಡಿ. ವಿದೇಶದ ಇಬ್ಬರು, ಹೊರರಾಜ್ಯದ ಓರ್ವ ಹಾಗೂ ಸ್ಥಳೀಯ 08 ವ್ಯಕ್ತಿಗಳು ಸೇರಿದಂತೆ ಒಟ್ಟು 11 ವ್ಯಕ್ತಿಗಳನ್ನು ವಿವಿಧ ದಿನಾಂಕಗಳಂದು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.
ವಶಕ್ಕೆ ಪಡೆದ 11 ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ, ವಿದೇಶಿ ಮೂಲದ, ಹೊರರಾಜ್ಯದ ಮತ್ತು ಸ್ಥಳೀಯ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ, ಗಾಂಜಾ. ಹೈಡೋಗಾಂಜಾ ಮತ್ತು ಹೆರಾಯಿನ್ ಅನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ತಪ್ಪೆಪ್ಪಿಕೊಂಡಿರುತ್ತಾರೆ.
ಅವರುಗಳ ವಶದಲ್ಲಿದ್ದ ನಿಷೇಧಿತ ಮಾದಕ ವಸ್ತುಗಳಾದ 2 ಕೆ.ಜಿ 07 ಗ್ರಾಂ ಎಂಡಿಎಂಎ 31 ಕೆ.ಜಿ 396 ಗ್ರಾಂ ಗಾಂಜಾ, 220 ಗ್ರಾಂ ಹೈಡೋಗಾಂಜಾ, 162 ಗ್ರಾಂ ಹೆರಾಯಿನ್ ಹಾಗೂ ಕೃತ್ಯಕ್ಕೆ ಬಳಸಿದ್ದ 01 ದ್ವಿ-ಚಕ್ರ ವಾಹನ ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ * 2,57,00,000/- (ಎರಡು ಕೋಟಿ ಐವತ್ತೇಳು ಲಕ್ಷ ರೂಪಾಯಿ). (ಮಾರುಕಟ್ಟೆ ಮೌಲ್ಯ * 5.14 ಕೋಟಿ). ಈ ಪ್ರಕರಣವೊಂದರಲ್ಲಿ ಓರ್ವ ಆರೋಪಿಯು ತಲೆಮರೆಸಿಕೊಂಡಿದ್ದು ಹಾಗೂ ಆರೋಪಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುತ್ತವೆ.
ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹನ್ನೊಂದು ಆರೋಪಿಗಳನ್ನು ವಿವಿಧ ದಿನಾಂಕಗಳಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಹನ್ನೊಂದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಗಳನ್ನು ಉಪ ಪೊಲೀಸ್ ಆಯುಕ್ತರುಗಳಾದ ಈಶಾನ್ಯ ವಿಭಾಗದ ಶ್ರೀ.ಜಿ.ಕೆ.ಮಿಥುನ್ ಕುಮಾರ್, ಐಪಿಎಸ್. ಆಗ್ನೆಯ ವಿಭಾಗದ ಮೊಹಮ್ಮದ್ ಸುಜೀತ.ಎಂ.ಎಸ್. ಐಪಿಎಸ್, ಪೂರ್ವ ವಿಭಾಗದ ಡಾ.ವಿಕ್ರಮ್ ಆಮಟೆ, ಐಪಿಎಸ್. ಉತ್ತರ ವಿಭಾಗದ ಶ್ರೀ. ಬಾಬಾ ಸಾಹೇಬ ನೇಮಗೌಡ, ಐಪಿಎಸ್ ರವರುಗಳ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತರುಗಳಾದ ಯಲಹಂಕ ಉಪವಿಭಾಗದ ಶ್ರೀ.ನರಸಿಂಹಮೂರ್ತಿ, ಮಡಿವಾಳ ಉಪವಿಭಾಗದ ಶ್ರೀ.ವಾಸುದೇವ್.ವಿ.ಕೆ. ಪುಲಿಕೇಶಿನಗರ ಉಪವಿಭಾಗದ ಶ್ರೀಮತಿ.ಗೀತಾ.ಸಿ.ಆರ್, ಯಶವಂತಪುರ ಉಪವಿಭಾಗದ ಶ್ರೀಮತಿ.ಮೇರಿ ಶೈಲಜಾ ರವರುಗಳ ನೇತೃತ್ವದಲ್ಲಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಯಲಹಂಕ ಉಪನಗರ ಪೊಲೀಸ್ ಠಾಣೆಯ ಶ್ರೀ.ಸುಧಾಕರ್ರೆಡ್ಡಿ.ಎ, ಆಡುಗೋಡಿ ಪೊಲೀಸ್ ಠಾಣೆಯ ಶ್ರೀ.ರವಿಕುಮಾರ್.ಸಿ. ಭಾರತಿನಗರ ಪೊಲೀಸ್ ಠಾಣೆಯ ಶ್ರೀ.ಫಿರೋಜ್ ಮೊಹಮದ್, ಪುಲಿಕೇಶಿನಗರ ಪೊಲೀಸ್ ಠಾಣೆಯ ಶ್ರೀ.ಗೋವಿಂದರಾಜು.ಬಿ,ಚಾಲಹಳ್ಳಿ ಪೊಲೀಸ್ ಠಾಣೆಯ ಶ್ರೀ.ಶಿವಕುಮಾರ್.ಟಿ.ಸಿ ರವರುಗಳು ಹಾಗೂ ಇತರೆ ಅಧಿಕಾರಿ ಸಿಬ್ಬಂದಿಯವರುಗಳ ತಂಡ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









