ಬೀದರ್ ನೆಹರು ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಪಥ ಸಂಚಲನ ಅಚ್ಚುಕಟ್ಟಾಗಿ ಶಿಸ್ತು ಬದ್ಧವಾಗಿ ನಡೆಸಿದ್ದ ತುಕಡಿಗಳಿಗೆ ಅಭಿನಂದನೆಗಳು”.
ದಿನಾಂಕ : 15-08-2024 ರಂದು ಬೀದರ್ ಜಿಲ್ಲೆಯ ನೆಹರು ಕ್ರೀಡಾಂಗಣದಲ್ಲಿ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ಪೊಲೀಸ್ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪಥ ಸಂಚಲನದ ಮುಂದಾಳತ್ವವನ್ನು ವಹಿಸಿದ ಪರೇಡ್ ಕಮಾಂಡರ್ ರವರಾದ ಶ್ರೀ ಸುನಿಲ್ ಕೊಡ್ಲಿ, ಡಿ.ವೈ.ಎ.ಸ್ಪಿ ಡಿ.ಎ.ಆರ್ ಬೀದರ್ ರವರು ವಿಶೇಷ ಮುತುವರ್ಜಿವಹಿಸಿ, ಸತತ ಒಂದು ವಾರಗಳ ಕಾಲ ಸ್ವತಹ ಮುಂದೆ ನಿಂತು ಎಲ್ಲಾ 12 ತುಕಡಿಗಳ ಕವಾಯತನ್ನು ಪರಿಪೂರ್ಣವಾಗಿ ಬರುವವರೆಗೂ ಕವಾಯತು ರಿಹರ್ಸಲನ್ನು ಮಾಡಿಸಿ, ಇಂದು ಪಥ ಸಂಚಲನವನ್ನು ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ಸಾರ್ವಜನಿಕರು ಚಪ್ಪಾಳೆ ತಟ್ಟುವಂತೆ ಕವಾಯತು ಪ್ರದರ್ಶನ ಮಾಡಿರುತ್ತಾರೆ, ಇದರ ಶ್ರೇಯಸನ್ನು ಪರೇಡ್ ಕಮಾಂಡರ್ ರವರಿಗೆ ಸಲ್ಲುತ್ತದೆ. ಇದೇ ರೀತಿಯ ಶಿಸ್ತನ್ನು ತಾವು ತಮ್ಮ ದಿನ ನಿತ್ಯದ ಕರ್ತವ್ಯದಲ್ಲಿಯೂ ಸಹ ಮುಂದುವರಿಸಿಕೊಂಡು ಹೋಗಿವಿರಿ ಎಂದು ಭಾವಿಸುತ್ತೇನೆ.

ಇವರ ಮುಂದಾಳತ್ವದಲ್ಲಿ ಒಟ್ಟು 12 ತುಕುಡಿಗಳು ಭಾಗವಹಿಸಿದ್ದು, ವಿವಿಧ ಘಟಕಗಳ ತುಕುಡಿಗಳ ಮುಂದಾಳತ್ವನ್ನು 01) ಶ್ರೀ ಭರತ, ಎ.ಆರ್.ಎಸ್.ಐ ಡಿ.ಎ.ಆರ್ ತುಕಡಿ 02) ಶ್ರೀ ಡಿ.ಎ. ಬಿರಾದರ ಆರ್.ಎಸ್.ಐ ಕೆ.ಎಸ್.ಆರ್.ಪಿ ತುಕಡಿ 03) ಶ್ರೀ ಸಿದ್ಧಲಿಂಗ, ಪಿ.ಎಸ್.ಐ ಚಿಂತಾಕಿ, ನಾಕಗರೀಕ ಪೊಲೀಸ್ ತುಕಡಿ 04) ಶ್ರೀ ಸಿದ್ಧೇಶ್ವರ ಗೇರಡೆ, ಪಿ.ಎಸ್.ಐ ಮನ್ನಳ್ಳಿ, ಸಂಚಾರ ಪೊಲೀಸ್ ತುಕಡಿ 05) ಶ್ರೀಮತಿ ನಂದಿನಿ, ಪಿ.ಎಸ್.ಐ ಮನ್ನಳ್ಳಿ, ಮಹಿಳಾ ಪೊಲೀಸ್ ತುಕಡಿ 06) ಶ್ರೀ ಟಿ. ಸೋಮನಾಥ, ಸಿನಿಯರ್ ಪ್ಲಟೂನ್ ಕಮಾಂಡರ್, ಗೃಹರಕ್ಷಕ ದಳ ತುಕಡಿ, 07) ಶ್ರೀ ಶಾಂತಕುಮಾರ, ಡಿ.ಆರ್.ಆಫ್.ಓ ಅರಣ್ಯ ಇಲಾಖೆ ತುಕಡಿ 08) ಕು. ಪೂಜಾ ಖರ್ಗೆ, ಅಬಕಾರಿ ನಿರೀಕ್ಷಕರು, ಅಬಕಾರಿ ಇಲಾಖೆ ತುಕಡಿ 09) ಶ್ರೀ ನವೀನಬಾಬು, ಅಗ್ನಿಶಾಮಕ ಠಾಣಾಧಿಕಾರಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ತುಕಡಿ 10) ಶ್ರೀ ನಿಂಗಪ್ಪ ಎಸ್. ಮನ್ನೂರ ಪಿ.ಎಸ್.ಐ ಬೆಮಳಖೇಡಾ, ವಿಶೇಷ ಘಟಕಗಳು (KSISF, Int, Prison) ತುಕಡಿ 11) ಕು. ಕುಮಾರ ರಾಜೇಶ ಸಿನಿಯರ್ ಅಂಡರ್ ಆಫಿಸರ್, ಸಿನಿಯರ್ ಎನ್.ಸಿ.ಸಿ ತುಕಡಿ 12) ಕು. ಕುಮಾರ ಶ್ರೀಧರ ಸರ್ಜೇಂಟ್, ಜೂನಿಯರ್ ಎನ್.ಸಿ.ಸಿ ರವರು ವಹಿಸಿಕೊಂಡಿರುತ್ತಾರೆ.
ಕವಾಯತ್ತಿನಲ್ಲಿ ಭಾಗವಹಸಿದ ಎಲ್ಲಾ ಸಮವಸ್ತ್ರಧಾರಿಗಳು ತಮ್ಮ ಶಿಸ್ತನ್ನು ಪಥ ಸಂಚಲನದ ಮೂಲಕ ಪ್ರದರ್ಶನ ನೀಡಿದ್ದ ಎಲ್ಲಾ 12 ತುಕಡಿಯ ಅಧಿಕಾರಿ ಮತ್ತು ಸಿಬ್ಬಂದಿ ರವರಿಗೆ ಅಭಿನಂದನೆಗಳು.









