ಆಡುಗೋಡಿ ಪೊಲೀಸ್ ಥಾ ಸರಹದ್ದಿನ ಲಕ್ಷಸಂದ್ರ ಬಡಾವಣೆಯಲ್ಲಿ ವಾಸವಿರುವ, ರಾದುದಾರರು ದಿನಾಂಕ:23/07/2024 ರಂದು ಅಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ:12/04/2024 ರಂದು ಕೆಲಸದ ನಿಮಿತ್ತಾ ಕುಟುಂಬ ಸಮೇತರಾಗಿ ದುಬೈಗೆ ಹೋಗಿರುತ್ತಾರೆ. ದುಬೈಗೆ ಹೋಗುವಾಗ 120 ಲಕ್ಷ ಬೆಲೆಬಾಳುವ 250 ರಿಂದ 350 ಗ್ರಾಂ ತೂಕದ ಚಿನ್ನಾಭರಣಗಳನ್ನು ಅವರ ಮನೆಯ ಕೊಠಡಿಯಲ್ಲಿ ಇಟ್ಟು ಬೀಗವನ್ನು ಹಾಕಿಕೊಂಡು ಹೋಗಿರುತ್ತಾರೆ. ಮನೆಯ ಕೆಲಸದವನಿಗೆ ಮನೆ ಸ್ವಚ್ಛ ಮಾಡಲು ತಿಳಿಸಿ, ಮನೆಯ ಬೀಗವನ್ನು ನೆಲಮಹಡಿಯಲ್ಲಿರುವ ಅವರ ಸಂಬಂಧಿಕರ ಮನೆಯಲ್ಲಿ ಕೊಟ್ಟು ಹೋಗಿರುತ್ತಾರೆ. ಮನೆಕೆಲಸದವನು ಮನೆ ಕೆಲಸಕ್ಕೆ ಬಂದು ಮನೆಯನ್ನು ಸ್ವಚ್ಛ ಮಾಡುತ್ತಿದ್ದನು. ಫಿರಾದಿಯವರು ದಿನಾಂಕ:17/07/2024 ರಂದು ದುಬೈನಿಂದ ಬೆಂಗಳೂರಿನ ಮನೆಗೆ ವಾಪಸ್ ಬಂದಿರುತ್ತಾರೆ. ದಿನಾಂಕ:22/07/2024 ರಂದು ರಾತ್ರಿ ಕೊಠಡಿಯಲ್ಲಿದ್ದ ಚಿನ್ನಾಭರಣಗಳನ್ನು ನೋಡಿದಾಗ ಚಿನ್ನಾಭರಣಗಳು ಕಳುವಾಗಿದ್ದವು. ಮನೆಯ ಕೆಲಸಕ್ಕೆ ಬರುತ್ತಿದ್ದ ಕೆಲಸದವನೇ ಕಳುವು ಮಾಡಿರಬಹುದೆಂದು ಅನುಮಾನ ವ್ಯಕ್ತಪಡಿಸಿ, ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು, ದಿನಾಂಕ:24/07/2024 ರಂದು ಮನೆ ಕೆಲಸದವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿರುತ್ತದೆ. ವಿಚಾರಣೆ ವೇಳೆಯಲ್ಲಿ ಆತನು ಕಳ್ಳತನ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ ಹಾಗೂ ಆತನು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಆತನ ಎರಡನೇಯ ಪತ್ನಿಗೆ ನೀಡಿರುವುದಾಗಿ ತಿಳಿಸಿರುತ್ತಾನೆ. ಮನೆಕೆಲಸದವನನ್ನು ಅದೇ ದಿನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 07 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ತನಿಖೆಯನ್ನು ಮುಂದುವರೆಸಿ, ದಿನಾಂಕ:25/07/2024 ರಂದು ಆರೋಪಿಯ ಎರಡನೇಯ ಪತ್ನಿಯು ವಾಸವಿರುವ ಚೆನ್ನೈನ ರಾಜೇಶ್ವರಿ ನಗರದಲ್ಲಿ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದಾಗ ಆಕೆಯು ತನ್ನ ಗಂಡ ಕಳುವು ಮಾಡಿದ್ದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದನ್ನು, ಆಕೆಯು ಕೆಲಸ ಮಾಡುವ ಪಾರ್ಲರ್ ಮಾಲೀಕರ ಬಳಿ ಗಿರವಿ ಇಟ್ಟಿರುವುದಾಗಿ ತಿಳಿಸಿರುತ್ತಾಳೆ. ಈ ಆರೋಪಿತೆಯು ಗಿರಿವಿ ಇಟ್ಟಿದ್ದ ಸುಮಾರು 135 ಗ್ರಾಂ ಚಿನ್ನದ ನೆಕ್ಲಸ್ನ್ನು ವಶಪಡಿಸಿಕೊಂಡಿರುತ್ತದೆ.
ಆರೋಪಿತೆಯಾದ ಎರಡನೆ ಪತ್ನಿಯು ನೀಡಿದ ಮಾಹಿತಿ ಮೇರೆಗೆ ಆಕೆಯ ಮಗ ಮತ್ತು ಆಕೆಯ ತಂಗಿಯ ಮೂಲಕ ಕೆಲವು ಚಿನ್ನಭರಣಗಳನ್ನು ವಿವಿಧ ಫೈನಾನ್ಸ್ ಕಂಪನಿಗಳಲ್ಲಿ ಗಿರವಿ ಇಟ್ಟಿದ್ದ 198 ಗ್ರಾಂ ತೂಕದ ಚಿನ್ನಾಭರಣಗಳನ್ನು ವರಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ದಿನಾಂಕ:26/07/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಮಾನ್ಯ ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಪ್ರಕರಣದಲ್ಲಿ ಒಟ್ಟು 333 ಗ್ರಾ ಚಿನ್ನಾ ಚರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 20,74,400/– (ಇಪ್ಪತ್ತು ಲಕ್ಷದ ಎಪ್ಪತ್ತನಾಲ್ಕು ಸಾವಿರದ ನಾಲ್ಕುನೂರು ರೂಪಾಯಿ).
ದಿನಾಂಕ:30/07/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ, ಐ.ಪಿ.ಎಸ್ ರವರು ಹಾಗೂ ಮಡಿವಾಳ ಉಪ ವಿಭಾಗದ ಎ.ಸಿ.ಪಿ ಶ್ರೀ.ಲಕ್ಷ್ಮೀನಾರಾಯಣ ರವರ ಮಾರ್ಗದರ್ಶನದಲ್ಲಿ ಆಡುಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ರವಿಕುಮಾರ್.ಸಿ ಅಧಿಕಾರಿ/ಸಿಬ್ಬಂದಿಗಳ ತಂಡ ಆರೋಪಿಗಳನ್ನು ಪತ್ತೆ ಮಾಡುದಲ್ಲಿ ಯಶಸ್ವಿಯಾಗಿರುತ್ತಾರೆ.
ರವರು









