ದಿ:-28/10/2024 ರಂದು ರಾತ್ರಿ-10-00 ಗಂಟೆಯಲ್ಲಿ ಪಿರ್ಯಾದಿ ಶೆಟ್ಟಳಯ್ಯ ಬಿನ್ ಆಂಜಿನಪ್ಪ, 50 ವರ್ಷ, ಅಡಿಕೆ ವ್ಯಾಪಾರ, ಮತ್ತು ಕೃಷಿ ಕೆಲಸ, ಕೋಡಿಹಳ್ಳಿ ಗೂಳೂರು ಹೋಬಳಿ, ರವರು ತಮ್ಮ ಮನೆಯ ಪಕ್ಕದ ಓಪನ್ ಶೆಡ್ ನಲ್ಲಿ 04 ಚೀಲ ಅಡಿಕೆಯನ್ನು ಒಣಗಿಸಿ ಇಟ್ಟಿದ್ದು ಮರು ದಿನ ಬೆಳಗ್ಗೆ ಎದ್ದು ಸುಮಾರು 08-00 ಗಂಟೆಯಲ್ಲಿ ಓಪನ್ ಶೆಡ್ ಹತ್ತಿರ ಹೋಗಿ ನೋಡಿದಾಗ 4 ಅಡಿಕೆ ಚೀಲಗಳನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ. ನಂತರ ಅಕ್ಕಪಕ್ಕ ವಿಚಾರಿಸಲಾಗಿ ನಮ್ಮ ಮನೆಯ ಸ್ವಲ್ಪ ದೂರದಲ್ಲಿರುವ ಮೃತ್ಯುಂಜಯ ಕುಮಾರ್ ಬಿನ್ ಲೇ ಪುಟ್ಟವೀರಯ್ಯ ರವರ ಮನೆಯ ಹಿಂಭಾಗದ ಶೆಡ್ ಶೀಟಿನ ಕೆಳಗೆ ಆರಿಸಿ ಒಣಗಿಸಿ ಇಟ್ಟಿದ್ದ 16 ಚೀಲ ಅಡಿಕೆಯನ್ನು ಯಾರೋ ಕಳ್ಳರು ಅದೇ ದಿನ ದಿ-28/10/2024 ರಂದು ರಾತ್ರಿ ಕಳ್ಳತನ ಮಾಡಿರುತ್ತಾರೆಂದು ತಿಳಿಸಿರುತ್ತಾರೆ. ಆದ್ದರಿಂದ ಯಾರೋ ಕಳ್ಳರು ಕಳ್ಳತನ ಮಾಡಿರುವ ಒಟ್ಟು 20 ಚೀಲ ಅಡಿಕೆಯನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಮೊ ಸಂ- 207/2024 ಕಲಂ 303(2) ಬಿ.ಎನ್.ಎಸ್ ರೀತ್ಯ ಪ್ರಕರಣ ದಾಖಲಿಸಿರುತ್ತದೆ.
ಮೇಲ್ಕಂಡ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಿ ಆರೋಪಿಯಾದ
1) ಪ್ರಸನ್ನಕುಮಾರ್ ಬಿನ್ ಲಗಳಯ್ಯ, 40 ವರ್ಷ, ಕೃಷಿ ಕೆಲಸ, ವಾಸ ತಿಮ್ಮನಪಾಳ್ಯ ನಿಡುವಳಲು ಪೋಸ್ಟ್ ಹೆಟ್ಟೂರು ಹೋಬಳಿ, ತುಮಕೂರು.
ಈತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಈತನು ಕಳ್ಳತನ ಮಾಡಿದ
* 09 ಚೀಲ ಒಣಗಿದ ಅಡಿಕೆ (ಸುಮಾರು 700-800 ಕೆ.ಜಿ.)
* ಕೃತ್ಯಕ್ಕೆ ಬಳಸಿದ ಕೆ.ಎ.29 .ಸಿ.0747 ಬಜಾಜ್ ಮ್ಯಾಕ್ಸಿಮಾ ಗೂಡ್ಸ್ ವಾಹನ ವನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಒಟ್ಟು ಅಂದಾಜು ಮೌಲ್ಯ 6 ಲಕ್ಷರೂ ಆಗಿರುತ್ತದೆ.

ಈ ಪ್ರಕರಣವನ್ನು ಬೇದಿಸುವಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ.ಮರಿಯಪ್ಪ, ಬಿ.ಎಸ್. ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ಹಾಗೂ ಮಾನ್ಯ ಚಂದ್ರಶೇಖರ್ಪೊಲೀಸ್ ಉಪಾಧೀಕ್ಷಕರು ತುಮಕೂರು ಉಪ-ವಿಭಾಗ, ಕ್ಯಾತ್ಸಂದ್ರ ವೃತ್ತ ನಿರೀಕ್ಷಕರಾದ ರಾಮಪ್ರಸಾದ್ ಮತ್ತು ಹೆಬ್ಬರು ಪೊಲೀಸ್ ಠಾಣೆ. ಪಿ.ಎಸ್.ಐ ಬೈರೇಗೌಡ ಜಿ.ಎಸ್.ಮತ್ತು ಸಿಬ್ಬಂದಿಗಳಾದ ಸಿದ್ದರಾಜು,ಸುರೇಶ್, ಪುಟ್ಟರಾಜು, ಬಸವರಾಜು, ವಿರೂಪಾಕ್ಷ ಪಾಟೀಲ ರವರುಗಳು ಪತ್ತೆ ಮಾಡುವಲ್ಲಿ ಶ್ರಮಿಸಿದ್ದು, ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಶ್ಲಾಘಿಸಲಾಗಿರುತ್ತದೆ.









