727 ಗ್ರಾಂ ಚಿನ್ನಾಭರಣ ವಶ. ಮೌಲ್ಯ 63 ಲಕ್ಷ.
ಹಲಸೂರು ಗೇಟ್ ಪೊಲೀಸ್ ಠಾಣಾ ಸರಹದ್ದಿನ, ನಗರತ್ ಪೇಟ್ ಕ್ರಾಸ್, ಕೆಂಪಣ್ಣ ಲೇನ್ನಲ್ಲಿ ಕೊನಾರ್ಕ್ చాలా మeFంగా ఆండా అన్ని నంటరా ఎంబ ಅಂಗಡಿಯನ್ನು ಇಟ್ಟುಕೊಂಡಿರುವ ಪಿಯಾದುದಾರರು ದಿನಾಂಕ:18/01/2025 ರಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಚಿನ್ನದ ಆಭರಣಗಳ ಪರಿಶುದ್ದತೆ ಪರೀಕ್ಷೆ ಮಾಡಿ ಹಾಲ್ ಮಾರ್ಕ್ ಹಾಕುವ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರ ಅಂಗಡಿಯಲ್ಲಿ ಆರು ತಿಂಗಳಿನಿಂದ ಕೆಲಸಕ್ಕಿದ್ದ ಓರ್ವ ವ್ಯಕ್ತಿಯು ದಿನಾಂಕ: 15/01/2025 ರಂದು ಬೆಳಿಗ್ಗೆ ಅಂಗಡಿಯಲಿದ್ದ ಟೇಬಲ್ ಡ್ರಾಯರ್ನಲ್ಲಿಟ್ಟಿದ್ದ ಲಾಕರ್ನ ಬೀಗದ ಕೀಯನ್ನು ತೆಗೆದುಕೊಂಡು, ಲಾಕರ್ನ್ನು ತೆರೆದು ಲಾಕರ್ನಲ್ಲಿಟ್ಟಿದ್ದ ಎರಡು ಜ್ಯೂವೆಲರ್ಸ್ ಶಾಪ್ನವರು ಹಾಲ್ ಮಾರ್ಕ್ ಹಾಕಲು ನೀಡಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಭಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆ ಹಾಕಿ, ದಿನಾಂಕ:06/02/2025 ರಂದು ಮೆಜೆಸ್ಟಿಕ್ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ:07/02/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ 12 ದಿನಗಳಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಪ್ರಕರಣದಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳನ್ನು ರಾಜಸ್ಥಾನ ರಾಜ್ಯದ ಬೆವಾರ್ ಜಿಲ್ಲೆಯಲ್ಲಿ ವಾಸವಿರುವ ಆರೋಪಿಯ ಸ್ನೇಹಿತನಿಗೆ ಮಾರಾಟ ಮಾಡುವ ಸಲುವಾಗಿ ನೀಡಿರುವುದಾಗಿ ತಿಳಿಸಿರುತ್ತಾನೆ ಹಾಗೂ ಆತನ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ.
ಈ ಮಾಹಿತಿಯನ್ನಾಧರಿಸಿ ದಿನಾಂಕ:10/02/2025 ರಂದು ರಾಜಸ್ಥಾನ ರಾಜ್ಯ, ಬೆವಾರ್ ಜಿಲ್ಲೆ, ಸಾಕೆತ್ ನಗರದ ಆದರ್ಶ ವಿದ್ಯಾ ಮಂದಿರ್ ಶಾಲೆ ಬಳಿ ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡುವ ಸಲುವಾಗಿ ಸ್ವೀಕರಿಸಿದ್ದ ಮತ್ತೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಸ್ವೀಕರಿಸಿರುವುದಾಗಿ ತಪ್ರೊಪ್ಪಿಕೊಂಡಿರುತ್ತಾನೆ ಹಾಗೂ ಸ್ವೀಕರಿಸಿದ ಚಿನ್ನಾಭರಣಗಳನ್ನು ರಾಜಸ್ಥಾನ ರಾಜ್ಯದ ವಿವಿಧ ಜಿಲ್ಲೆಗಳ ಚಿನ್ನದ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:13/02/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜುರುಪಡಿಸಿ 12 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಿ, ದಿನಾಂಕ:17/02/2025 ರಂದು ರಾಜಸ್ಥಾನದ ಬೆವಾರ್ ಪಟ್ಟಣದಲ್ಲಿರುವ ಗೋಲ್ಡ್ ಮತ್ತು ಸಿಲ್ವರ್ ಟೆಸ್ಟಿಂಗ್ ಸೆಂಟರ್ನಲ್ಲಿ ಮಾರಾಟ ಮಾಡಿದ್ದ 30 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿರುತ್ತದೆ.
ದಿನಾಂಕ:19/02/2025 ರಂದು ರಾಜಸ್ಥಾನದ ಭೀಮ್ ಪಟ್ಟಣದಲ್ಲಿರುವ ಜ್ಯೂವೆಲರಿ ಆರ್ಟ್, ಅಂಗಡಿಯಿಂದ 10 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿರುತ್ತದೆ.
ದಿನಾಂಕ:20/02/2025 ರಂದು ಚಿನ್ನಾಭರಣಗಳನ್ನು ಸ್ವೀಕರಿಸಿದ್ದ ರಾಜಸ್ಥಾನದ ಕರ್ಣಿಪುರ ಗ್ರಾಮದಲ್ಲಿ ವಾಸವಿರುವ ಆರೋಪಿತನ ಮನೆಯಲ್ಲಿಟ್ಟಿದ್ದ 213 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿರುತ್ತದೆ.
ದಿನಾಂಕ:20/02/2025 ರಂದು ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಚಿನ್ನಾಭರಣಗಳನ್ನು ಸ್ವೀಕರಿಸಿದ್ದ ಆರೋಪಿಯು ರಾಜಸ್ಥಾನದ ಬೆವಾರ್ ಪಟ್ಟಣದ ಚುಂಚಿನಾಕಾ ಕಾಲೋನಿಯಲ್ಲಿ ವಾಸವಿರುವ ಓರ್ವ ವ್ಯಕ್ತಿಗೆ 474 ಗ್ರಾಂ ಚಿನ್ನಾಭರಣಗಳನ್ನು ನೀಡಿದ್ದು, ಆತನ ವಾಸದ ಮನೆಯಿಂದ ದಿನಾಂಕ:21/02/2025 ರಂದು 474 ಗ್ರಾಂ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದ ಆರೋಪಿಗಳ ಬಂಧನದಿಂದ ಒಟ್ಟು 727 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಇವುಗಳ ಒಟ್ಟು ಮೌಲ್ಯ * 63,00,000/-(ಆರವತ್ತ ಮೂರು ಲಕ್ಷ ರೂಪಾಯಿ).
ದಿನಾಂಕ:23/02/2025 ರಂದು ಚಿನ್ನಾಭರಣಗಳನ್ನು ಸ್ವೀಕರಿಸಿದ್ದ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ಕೇಂದ್ರ ವಿಭಾಗ ರವರಾದ ಶ್ರೀ. ಶೇಖರ್ ಹೆಚ್.ಟಿ ಐ.ಪಿ.ಎಸ್ ಮತ್ತು ಎ.ಸಿ.ಪಿ ಹಲಸೂರುಗೇಟ್ ರವರಾದ ಶ್ರೀ ಶಿವಾನಂದ ಚಲವಾದಿ ರವರ ಮಾರ್ಗದರ್ಶನದಲ್ಲಿ ಹಲಸೂರುಗೇಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಹನಮಂತ ಕೆ ಭಜಂತ್ರಿ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









