ನ್ಯಾಮತಿ ತಾಲ್ಲೂಕು ಸಾಲಬಾಳು ಕ್ರಾಸ್ ಬಳಿಯ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಯಾರೋ ಯುವಕರು ಬೈಕಿನಲ್ಲಿ ಬಂದು ಪಿರ್ಯಾ ದಿಯ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಪಿರ್ಯಾದಿಯವರು ಕೂಡಲೇ 112 ಕ್ಕೆ ಕರೆ ಮಾಡಿ ದೂರು ನೀಡಿದ್ದು, ಘಟನಾ ಸ್ಥಳಕ್ಕೆ 112 ಅಧಿಕಾರಿಗಳು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದು ಘಟನಾ ಸ್ಥಳದಲ್ಲಿ ಮೊಬೈಲ್ ಕಸಿದುಕೊಂಡು ಹೋಗಿದ್ದ ಆರೋಪಿತರುಗಳಾದ 01) ಯೋಗೇಶ, 32 ವರ್ಷ, 02) ಯುವರಾಜ, 22 ವರ್ಷ, ಶಿವಮೊಗ್ಗ ಜಿಲ್ಲೆ ಇವರನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿದ್ದು, ಠಾಣೆಯಲ್ಲಿ ದಸ್ತಗಿರಿ ಕ್ರಮಗಳನ್ನು ಮಾಡಿದ್ದು, ಆರೋಪಿತರುಗಳಿಂದ ಕೃತ್ಯಕ್ಕೆ ಬಳಸಿದ 01 ಬೈಕ್ ಮತ್ತು ಪಿರ್ಯಾದಿಯಿಂದ ಕಿತ್ತುಕೊಂಡಿದ್ದ 02 ಮೊಬೈಲ್ಗಳನ್ನು ಕೃತ್ಯಕ್ಕೆ ಬಳಸಿದ 1 ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿತರುಗಳನ್ನು ಹಾಲಿ ನ್ಯಾಯಾಂಗ ಬಂಧನದಲ್ಲಿ ಒಪ್ಪಿಸಲಾಗಿರುತ್ತದೆ.
ಮೇಲ್ಕಂಡ ಪ್ರಕರಣದಲ್ಲಿ ಆರೋಪಿತರನ್ನು ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ 112 ಹೊಯ್ಸಳಅಧಿಕಾರಿ ಸಿಬ್ಬಂದಿಗಳಾದ ಶ್ರೀ ಗಿರೀಶ್ ನಾಯ್ಕ, ಶ್ರೀ ಹೇಮರಾಜ್ ಹಾಗೂ ನ್ಯಾಮತಿ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಶ್ರೀ ಆನಂದ ರವರುಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ, ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.
ಸಾರ್ವಜನಿಕರ ಗಮನಕ್ಕೆ:
ಪೊಲೀಸ್ ಇಲಾಖೆಗೆ ಸಂಬಧಿಸಿದತೆ ಯಾವುದೇ ತುರ್ತುಸೇವೆಗಳಿಗಾಗಿ ಹಾಗೂ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ದೂರು/ಮಾಹಿತಿ ನೀಡಲು 112 ಕ್ಕೆ ಕರೆ ಮಾಡಲು ತಿಳಿಸಿ









