ಶೇಷಾದ್ರಿಪುರಂ ಪೊಲೀಸ್ ಠಾಣಾ, ಸರಹದ್ದಿನ ನೆಹರು ನಗರದಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿರುವ ಪಿರಿಯಡ್ದಾರರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಒಂದು ದೂರನ್ನು ಸಲ್ಲಿಸಿರುತ್ತಾರೆ ದೂರಿನಲ್ಲಿ ಓರ್ವ ವ್ಯಕ್ತಿಯು ಪಿರಿಯಾದುದಾರರಿಗೆ ಫೋನ್ ಕರೆ ಮಾಡಿದ್ದು ಫೋನನ್ನು ಸ್ವೀಕರಿಸಿದ ಪಿರಿಯಾದುದಾರ ತಂದೆಗೆ ಫೋನ್ನಲ್ಲಿ ಆ ಆ ವ್ಯಕ್ತಿಯು ತನಗೆ ಒಂದು ಕೋಟಿ ಹಣವನ್ನು ನೀಡಬೇಕು ಇಲ್ಲವಾದರೆ ನಿನ್ನ ಮಗನನ್ನು ಕಿಡ್ನಾಪ್ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿರುತ್ತಾನೆ. ಈ ಕುರಿತು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು ತನಿಖೆಗಾಗಿ ಕೇಂದ್ರ ವಿಭಾಗದ ಮತ್ತು ಸಿಸಿಬಿಯ ಅಧಿಕಾರಿಗಳ ತಂಡಗಳನ್ನು ರಚಿಸಿ ಅದರಂತೆ ತನಿಖೆಗಾಗಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಒಂದು ತಂಡವನ್ನು ಸ್ಥಳೀಯ ಸಂಪರ್ಕಗಳ ಪತ್ತೆಗೆ ಮತ್ತೊಂದು ತಂಡವನ್ನು ಉತ್ತರ ಪ್ರದೇಶದಲ್ಲಿ ಆರೋಪಿಗಳ ಪತ್ತೆಗೆ ನೇಮಿಸಿರುತ್ತಾರೆ
ತನಿಖೆಯನ್ನು ಮುಂದುವರಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಜೆಸಿ ರಸ್ತೆಯಲ್ಲಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾನೆ
ಈ ಪ್ರಕರಣದ ಪಿರಿಯಾದುದಾರರು ಮತ್ತು ಇತರೆ ಮೂರು ವ್ಯಕ್ತಿಗಳು ಸರಿ ಆರೋಪಿಗೆ ಸೈಟ್ ಹಾಗೂ ವ್ಯವಹಾರದಲ್ಲಿ ಮೋಸ ಮಾಡಿರುವುದಾಗಿ ಆರೋಪಿಯು ತಿಳಿಸಿರುತ್ತಾನೆ
ಆರೋಪಿಗೆ ವಂಚನೆ ಮಾಡಿದ್ದರಿಂದ ಇತರೆ ಮೂರು ವ್ಯಕ್ತಿಗಳಿಗೆ ಹೆದರಿಕೆ ಒಡ್ಡಿ ಹಣ ವಸೂಲಿ ಮಾಡುವುದರ ಉದ್ದೇಶದಿಂದ ಉತ್ತರ ಪ್ರದೇಶ ರಾಜ್ಯದ ಮೀರತ್ ನಗರದಿಂದ ಮೂವರ ವ್ಯಕ್ತಿಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಅವರುಗಳಿಗೆ ಸೌಲಭ್ಯವನ್ನು ಒದಗಿಸಿ ಬೆದರಿಕೆ ಒಡ್ಡಲು ಮೊಬೈಲ್ ಫೋನ್ ಗಳನ್ನು ನೀಡಿ ಅವರುಗಳಿಂದ ಪಿರಿಯಾದುದಾರರಿಗೆ ಉತ್ತರ ಭಾರತದ ಗೆಮಿಸ್ಟರ್ನ ಹೆಸರಿನವರೆಂದು ಹೇಳಿ ಹಣದ ಬೇಡಿಕೆ ಒಡ್ಡಿ ಹಣ ನೀಡದಿದ್ದಲ್ಲಿ ಕಿಡ್ನಾಪ್ ಮಾಡುತ್ತದೆ ಎಂದು ಬೆದರಿಕೆ ಹಾಕಿ ಕೃತ್ಯ ಎಸೆಯಾಗಿರುತ್ತವೆಂದು ಆರೋಪಿಯು ತಿಳಿಸಿರುತ್ತಾನೆ
ತನಿಖೆ ಮುಂದುವರಿಸಿದ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಅಧಿಕಾರಿಗಳು ದೆಹಲಿಯ ಪೊಲೀಸರ ಸಹಕಾರದೊಂದಿಗೆ ದೆಹಲಿಯಲ್ಲಿ ವಾಸವಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಮೂರು ತಪ್ಪು ಕೊಂಡಿರುತ್ತಾರೆ
ಆರೋಪಿಗಳು ಕೃತ್ಯ ಎಸೆಗಲು ಪಿಸ್ತೂಲ್ ಗುಂಡುಗಳೊಂದಿಗೆ ಬೆಂಗಳೂರಿಗೆ ಬಂದಿದ್ದವೆಂದು ತಿಳಿಸಿರುವ ಹಿನ್ನೆಲೆಯಲ್ಲಿ ಅವುಗಳನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ತಿಳಿಸಿರುತ್ತಾರೆ
ಈ ಜಂಟಿ ಕಾರ್ಯಾಚರಣೆಯನ್ನು ಸಿ ವಂಶಿಕೃಷ್ಣ ಐಪಿಎಸ್, ಜಂಟಿ ಪೋಲಿಸ್ ಆಯುಕ್ತರು ಪಶ್ಚಿಮ ರವರ ಮಾರ್ಗದರ್ಶನದಲ್ಲಿ ಅಕೆ ಅಕ್ಷಯ್ ಮಚ್ಚೀಂದ್ರ ಐಪಿಎಸ್, ರಾಜ ಹಿಮಾಮ್ ಕಾಸಿಂ ಉಪ ಪೊಲೀಸ್ ಆಯುಕ್ತರು ಅಪರಾಧ-2 , ಬೆಂಗಳೂರು ನಗರ ಪ್ರಕಾಶ್ ಆರ್ ಸಹಾಯಕ ಪೊಲೀಸ್ ಆಯುಕ್ತರು ಶೇಷಾದ್ರಿಪುರಂ ರವರ ಮಾರ್ಗದರ್ಶನದಲ್ಲಿ ಬಾಲಕೃಷ್ಣ ಆರ್, ಪೊಲೀಸ್ ಇನ್ಸ್ಪೆಕ್ಟರ್ ಶೇಷಾದ್ರಿಪುರಂ ಪೊಲೀಸ್ ಠಾಣೆ, ಪಾರುಕ್ ಪಾಷಾ ಇನ್ಸ್ಪೆಕ್ಟರ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ, ಶಂಕರ್ ಗೌಡ ಬಸನಗೌಡ ವೈಯಾಲಿಕಾವಲ್ ಇನ್ಸ್ಪೆಕ್ಟರ್, ಜಮೀರ್ ಎಂ ಸಬ್ ಇನ್ಸ್ಪೆಕ್ಟರ್ ಸದಾಶಿವನಗರ, ಮತ್ತು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್, ಸುನಿಲ್ ಬೆಳವಟಗಿ, ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳ ತಂಡ ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ
ಕೇಂದ್ರ ವಿಭಾಗದ ಶೇಷಾದ್ರಿಪುರಂ ಪೊಲೀಸ್ ಠಾಣೆ ಮತ್ತು ಸಿಸಿಬಿ ಅಧಿಕಾರಿಗಳ ತಂಡವು ಈ ಜಟ್ಟಿ ಕಾರ್ಯಚರಣೆಯನ್ನು ಕೈಗೊಂಡು ಪ್ರಕರಣ ದಾಖಲಾದ ಕೇವಲ 48 ಗಂಟೆಯೊಳಗೆ ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









