ಅಕ್ರಮವಾಗಿ ಸಾಗಿಸುತ್ತಿದ್ದ 36 ಕೆಜಿ ಗಾಂಜಾ ವಶ
ಐದು ಜನ ಆರೋಪಿಗಳ ಬಂಧನ
ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ರವಿಕುಮಾರ್ ಕೆ ವೈರವರಿಗೆ ಆಂಧ್ರದ ತಿರುಪತಿ ಕಡೆಯಿಂದ ಮುಳಬಾಗಿಲು ಶ್ರೀನಿವಾಸಪುರ ಮಾರ್ಗವಾಗಿ ಚೇಳೂರು ಕಡೆಗೆ ಒಂದು ವಾಹನದಲ್ಲಿ ಐದು ಜನ ಚೇಳೂರು ಕಡೆಗೆ ಗಾಂಜಾವನ್ನು ಮಾರಾಟ ಮಾಡಲು ಸಾಗಿಸಿಕೊಂಡು ಕಾರಿನಲ್ಲಿ ಬರುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಶ್ರೀನಿವಾಸಪುರ ಚಿಂತಾಮಣಿ ರಸ್ತೆಯ ಮಾಡಿಕೆರೆ ಕ್ರಾಸ್ ಬಳಿ ಶ್ರೀನಿವಾಸಪುರ ಕಡೆಯಿಂದ ಬರುತ್ತಿದ್ದ ಮಹಿಂದ್ರ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಒಬ್ಬ ಮಹಿಳೆ ಮತ್ತು ನಾಲ್ಕು ಜನ ಪುರುಷರು ಇದ್ದು ಗಾಂಜಾ ಬ್ಯಾಗ್ ಗಳು ಕಂಡು ಬಂದಿರುತ್ತದೆ

ಸುಮಾರು 17 ಲಕ್ಷದ 50,000 ರೂಪಾಯಿ ಬೆಲೆಬಾಳುವ 36 ಕೆಜಿಗಾಂಜಾ ಕಂಡುಬಂದಿದ್ದು ಮಾದಕ ವಸ್ತು ಗಾಂಜಾ ಮತ್ತು ಕಾರನ್ನು ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ
ಆರೋಪಿಗಳಾದ ದೇವಮ್ಮ, ಮಾರಪ್ಪ, ವೆಂಕಟರಮಣ, ಆದಿ ನಾರಾಯಣ, ಅಂಜಿ, ಎಂದು ತಿಳಿಸಲಾಗಿದೆ
ಕಾರ್ಯಾಚರಣೆಯಲ್ಲಿ ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ರವಿಕುಮಾರ್ ಕೆ ವೈ, ಇನ್ಸ್ಪೆಕ್ಟರ್ ಸೂರ್ಯ ಪ್ರಕಾಶ್, ಸಿಬ್ಬಂದಿಯವರಾದ ಸುಬ್ರಮಣಿ, ಕೃಷ್ಣಪ್ಪ, ಅಂಬರೀಶ್, ನಾರಾಯಣಸ್ವಾಮಿ, ಜವರಪ್ಪ, ಬಾರೇಶವಲ್ಲಿ, ಬಾಲಾಜಿ, ಭಾಗ್ಯಮ್ಮ, ಮಹಬೂಬ್ ಪಾಷಾ, ಸಿಬ್ಬಂದಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಕುಶಾಲ್ ಚೌಕ್ಸೆ, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜಾ ಇಮಾಮ್ ಕಾಸಿಂ ರವರು ಶ್ಲಾಘಿಸಿದ್ದಾರೆ.
ವರದಿ
ಶಶಿಕುಮಾರ್ ವಿ









