ಮಹದೇವಪುರ ಪೊಲೀಸರಿಂದ 30.40 ಲಕ್ಷ ಮೌಲ್ಯಯುತ 93 ಮೊಬೈಲ್ ಫೋನ್ಗಳ ಭರ್ಜರಿ ಬೇಟೆ ಮುಂದುವರೆದಿದೆ. ಪ್ರಕರಣ ದಾಖಲಾಗಿ ಕೇವಲ 48 ಗಂಟೆಯೊಳಗೆ ಅಪರಾಧಿಯನ್ನು ಬಂಧಿಸುವಲ್ಲಿ ಇನ್ಸ್ಪೆಕ್ಟರ್ ಶ್ರೀ ಪ್ರವೀಣ್ ಬಾಬು ಜಿ ಮತ್ತು ಅವರ ಸಿಬ್ಬಂದಿ ವರ್ಗ ಯಶಸ್ವಿಯಾಗಿರುತ್ತಾರೆ.
ಅಂದಹಾಗೆ ಜನವರಿ 15 ರ ರಾತ್ರಿ ಬಿ.ನಾರಾಯಣಪುರದ ಹತ್ತಿರ ದ್ವಿಚಕ್ರ ವಾಹನದಲ್ಲಿ ಬಂದಂತಹ ಸುಲಿಗೆದಾರರು ಮೊಬೈಲನ್ನು ಕಸಿದುಕೊಂಡಿದ್ದರು. ತನಿಖೆಯನ್ನು ಅಚ್ಚುಕಟ್ಟಾಗಿ ನಡೆಸಿದಾಗ ಮಹದೇವಪುರ, ಥಣಿಸಂದ್ರ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಿವಿಧ ಸಹಚರರನ್ನು ಕ್ರಮವಾಗಿ 2, 2 ಮತ್ತು 21 ಮೊಬೈಲ್ ಫೋನ್ಗಳ ಸಮೇತ ಹಿಡಿದರು. ನಂತರ ಇದೇ ಕ್ರಮವಾಗಿ 21,2 ಮತ್ತು 47 ಮೊಬೈಲ್ಗಳನ್ನು ಖದೀಮರ ಮನೆಯಿಂದ ನೇರವಾಗಿ ತಮ್ಮ ಅಸ್ತಿತ್ವಕ್ಕೆ ಪಡೆದುಕೊಳ್ಳಲಾಯಿತು. ಇದರ ಒಟ್ಟು ಮೌಲ್ಯ ಸುಮಾರು 30.40 ಲಕ್ಷ ಎಂದು ಅಂದಾಜಿಸಲಾಗಿದೆ.
ನಗರದ ವಿವಿದೆಡೆ ಸುಲಿಗೆ ಮಾಡಿದ ಮೊಬೈಲ್ಗಳ ಪೈಕಿ ಮಹದೇವನಗರ ಮತ್ತು ಬೆಳ್ಳಂದೂರು ಠಾಣೆಯ 10 ಸುಲಿಗೆ ಪ್ರಕರಣಗಳಿದ್ದು, ಉಳಿದ 83 ಮೊಬೈಲ್ಗಳ ಮಾಲೀಕರ ಪತ್ತೆಕಾರ್ಯ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ವೈಟ್ ಫೀಲ್ಡ್ ಡಾ:ಶಿವಕುಮಾರ್ ಗುಣಾರೇ, ಐಪಿಎಸ್ ಸಹಾಯಕ ಪೊಲೀಸ್ ಆಯುಕ್ತರು, ವೈಟ್ಫೀಲ್ಡ್ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಮಹದೇವಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಪ್ರವೀಣ್ ಬಾಬು.ಜಿ ಹಾಗೂ ಅಧಿಕಾರಿ/ಸಿಬ್ಬಂದಿರವರು ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ ಮೋಹನ್










