ಜೆ.ಬಿ.ನಗರದ ಚಲ್ಲಘಟ್ಟದ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ದಸರಾ ಹಬ್ಬದ ವೇಳೆ ಬೆಳ್ಳಿ ವಸ್ತುಗಳನ್ನು ಪರಿಶೀಲಿಸಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಜನವರಿ 28, 2026 ರಂದು ದೂರು ದಾಖಲಾಗಿತ್ತು.ತನಿಖೆ ಆರಂಭಿಸಿದ ಪೊಲೀಸರು ಜನವರಿ 30ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣಿವೆ ಬಿಳಚಿ ಗ್ರಾಮದಲ್ಲಿ ಕೆಲಸದಾಕೆಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.ಆರೋಪಿತೆಯು ಕಳೆದ ಎರಡುವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದಾಗ ಯಾರಿಗೂ ತಿಳಿಯದಂತೆ ಹಂತ ಹಂತವಾಗಿ ಬೆಳ್ಳಿ ಮತ್ತು ಚಿನ್ನವನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಜಪ್ತಿ ಮಾಡಿದ ವಸ್ತುಗಳು: * 12.5 ಕೆ.ಜಿ ಬೆಳ್ಳಿಯ ವಸ್ತುಗಳು.

7.5 ಗ್ರಾಂ ಚಿನ್ನಾಭರಣ.ಒಟ್ಟು ಮೌಲ್ಯ: 35,00,000/- (35 ಲಕ್ಷ ರೂಪಾಯಿ).
ಕಳವು ಮಾಡಿದ ಈ ವಸ್ತುಗಳನ್ನು ಮುರುಗೇಶ್ ಪಾಳ್ಯದ ಮೂರು ಪ್ರತ್ಯೇಕ ಜ್ಯೂವೆಲರಿ ಅಂಗಡಿಗಳಲ್ಲಿ ಅಡಮಾನವಿಟ್ಟಿರುವುದು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೂರ್ವ ವಿಭಾಗದ ಡಿಸಿಪಿ ಡಾ. ವಿಕ್ರಮ್ ಅಮಟೆ (IPS) ಮತ್ತು ಎಸಿಪಿ ರಂಗಪ್ಪ ಟಿ. ಅವರ ಮಾರ್ಗದರ್ಶನದಲ್ಲಿ, ಜೆ.ಬಿ.ನಗರ ಇನ್ಸ್ಪೆಕ್ಟರ್ ಬಸವರಾಜು ಎಂ. ಹಾಗೂ ಅವರ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.









