ಪಿರಯಾಾ ದಿಯವರಾದ ಶ್ರೀ ರಾಘವೇಂದ್ರ.ಪಿ ತಂದೆ ಪದ್ಮನಾಭಶೆಟ್ಟಿ ರವರು ತಮ್ಮ ಹಾಸಿಗೆ ಹಿಡಿದ ವಯೋವೃದ್ದ ತಂದೆಯವರಿಗೆ ನೋಡಿಕೊಳ್ಳಲು ಶ್ರೀ ಗುರುಕೊಟ್ಟುರೇಶ್ವರ ಹೋಮ್ ನರ್ಸಿಂಗ್ ಸರ್ವೀಸ್ ಏಜೆನ್ಸಿಯಿಂದ ಪ್ರತಿ ತಿಂಗಳು 18000/- ರೂ ವೇತನದಂತೆ ವಿಜಯ್ ಎಂಬುವವನಿಗೆ ದಿನಾಂಕ:04-03-2025 ರಂದು ನೇಮಕ ಮಾಡಿಕೊಂಡಿದ್ದು, ಅದರಂತೆ ಸದರಿಯವನು ವಿಜಯ್ ಇವನು ಪರ್ಯಾಜದಿಯವರ ತಂದೆಯವರಿಗೆ ಪಾಲನೆ ಮಾಡುತ್ತಾ ಪಿರ್ಯಾದಿಯವರ ಮನೆಯಲ್ಲಿಯೇ ಇದ್ದು ದಿನಾಂಕ:01-04-2025 ರಂದು ಬೆಳಿಗ್ಗೆ ಪಿರ್ಯಾದಿಯವರ ಮನೆಯ ರೂಮ್ ವಾಲ್ ಡ್ರೂಪ್ ಡ್ರಾ ನಲ್ಲಿಟ್ಟಿದ್ದ 95 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಪತ್ತೆ ಮಾಡಿಕೊಡಿ ಅಂತ ದಿ:02.04.2025 ರಂದು ದೂರು ನೀಡಿದ ಮೇರೆಗೆ ಕೆ.ಟಿ.ಜೆ ನಗರ ಪೊಲೀಸ್ ಠಾಣಾ ಗುನ್ನೆ ನಂ-63/2025 ಕಲಂ-306 ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಸದರಿ ಪ್ರಕರಣದಲ್ಲಿ ಆರೋಪಿ ಹಾಗು ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ್ ಶ್ರೀ ಎಂ.ಸAತೋ಼ಷ್. ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಮಂಜುನಾಥ್. ಜಿ. ಹಾಗೂ ಶ್ರೀ ಶರಣ ಬಸವೇಶ್ವರ.ಬಿ. ಪೊಲೀಸ್ ಉಪಾಧೀಕ್ಷಕರು ದಾವಣಗೆರೆ ನಗರ ಉಪವಿಭಾಗ ದಾವಣಗೆರೆ ರವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ. ಸುನೀಲ್ ಕುಮಾರ್.ಹೆಚ್.ಎಸ್. ರವರ ನೇತೃತ್ವದ ತಂಡದ ಪಿ.ಎಸ್.ಐ ರವರಾದ ಶ್ರೀಮತಿ ಲತಾ.ಆರ್. ಹಾಗು ಸಿಬ್ಬಂದಿಯವರನ್ನೊಳಗೊAಡ ತಂಡದವರು ದಿ:17.04.2025 ರಂದು ಆರೋಪಿತನಾದ ವಿಜಯ್ @ ಭದ್ರಪ್ಪ ಬಸಪ್ಪ ಹಡಪದ, 29 ವರ್ಷ, ವಾಸ ಮಣ್ಣೂರು ಗ್ರಾಮ ದೇವರಹಿಪ್ಪರಗಿ ತಾಲ್ಲೂಕ್ ಬಿಜಾಪುರ ಜಿಲ್ಲೆ ಇವನನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನನ್ನು ಕೂಲಂಕುಷವಾಗಿ ವಿಚಾರಣೆ ಮಾಡಿ ಸದರಿ ಆರೋಪಿತನ ಬಳಿ ಇದ್ದ ಪರ್ಯಾದದಿಯವರ ಮನೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದ 1)ಕೆ.ಟಿಜೆ ನಗರ ಪೊಲೀಸ್ ಠಾಣೆ ಗುನ್ನೆ ನಂ-63/2025 ಕಲಂ-306 ಬಿ.ಎನ್.ಎಸ್. ಪ್ರಕರಣದಲ್ಲಿ ಕಳ್ಳತನವಾದ ಅಂದಾಜು 8,00,000/-ರೂಬೆಲೆ ಬಾಳುವ 95 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ದೂರುದಾರರ ಬಾಬ್ತು 95 ಗ್ರಾಂ ಬಂಗಾರದ ಆಭರಣಗಳನ್ನು ಘನ ನ್ಯಾಯಾಲಯದ ಅನುಮತಿ ಆದೇಶದ ಮೇರೆಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾಪ್ರಶಾಂತ್ ಐಪಿಎಸ್ರವರು ಪಿರ್ಯಾ ದಿಯವರಾದ ಶ್ರೀ ರಾಘವೇಂದ್ರ.ಪಿ ರವರಿಗೆ ಹಸ್ತಾಂತರಿಸಿ ಸದರಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ. ಸುನೀಲ್ ಕುಮಾರ್.ಹೆಚ್.ಎಸ್. ರವರ ನೇತೃತ್ವದ ತಂಡದ ಪಿ.ಎಸ್.ಐ ರವರಾದ ಶ್ರೀಮತಿ ಲತಾ.ಆರ್. ಮತ್ತು ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ., ರವಿನಾಯ್ಕ, ಶ್ರೀಮತಿ ಗೌರಮ್ಮ ಮತ್ತು ರಾಮಚಂದ್ರ ಜಾದವ್, ಶಿವಕುಮಾರ್ ಮತ್ತು ಸಿದ್ದಾರ್ಥ್ ರವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾಪ್ರಶಾಂತ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.









