128 ಗ್ರಾಂ ಚಿನ್ನಾಭರಣ ವಶ. 12 ಲಕ್ಷ.
ಹೆಚ್.ಎ.ಎಲ್ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಬಸವನಗರದ ವಾಸಿಯಾದ ಪಿರ್ಯಾದುದಾರರು ದಿನಾಂಕ:11/05/2025 ರಂದು ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:10/05/2025 ರಂದು ಬೆಳಿಗ್ಗೆ ಕುಟುಂಬ ಸಮೇತರಾಗಿ ಹೊಸ ಕಾರಿನ ಪೂಜೆ ಮಾಡಿಸಲೆಂದು ಕಸ್ತೂರ ಬಾ ರಸ್ತೆಯಲ್ಲಿರುವ ದೇವಸ್ಥಾನಕ್ಕೆ ತೆರಳಿರುತ್ತಾರೆ. ನಂತರ ಸಂಜೆ ಸುಮಾರು 6 ಗಂಟೆಗೆ ಪಿರ್ಯಾದುದಾರರು ಮನೆಕೆಲಸದಾಕೆಗೆ ಕರೆ ಮಾಡಿ, ಈ ದಿನ ಕೆಲಸಕ್ಕೆ ಬರುವುದು ಬೇಡವೆಂದು ತಿಳಿಸಿರುತ್ತಾರೆ. ನಂತರ ಸಂಜೆ ಸುಮಾರು 07:00 ಗಂಟೆಗೆ ಪಿರ್ಯಾದುದಾರರು ವಾಪಸ್ ಮನೆಗೆ ಬಂದಾಗ, ಪಿರ್ಯಾದುದಾರರ ಪಕ್ಕದ ಮನೆಯ ಮಗುವೊಂದು ಮನೆಕೆಲಸ ಮಾಡುವ ಮಹಿಳೆಯು ಮನೆಗೆ ಬಂದು ಹೋಗಿರುತ್ತಾಳೆಂದು ತಿಳಿಸಿರುತ್ತದೆ. ಪಿರ್ಯಾದಾರರು ಮನೆಯ ಒಳಗೆ ಹೋಗಿ ನೋಡಲಾಗಿ, ಮನೆಯಲ್ಲಿದ್ದ ಸುಮಾರು 220 ರಿಂದ 250 ಗ್ರಾಂ ಚಿನ್ನಾಭರಣಗಳು ಕಳವುವಾಗಿರುವ ಬಗ್ಗೆ ಅರಿತು ಕೆಲಸದಾಕೆಯ ಮೇಲೆ ಅನುಮಾನವಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ದಿನಾಂಕ:12/05/2025 ರಂದು ಕೆಲಸದಾಕೆಯನ್ನು ಬಸವನಗರದ ಅಪಾರ್ಟ್ ಮೆಂಟ್ ವೊಂದರ ಬಳಿ ದ್ವಿ-ಚಕ್ರ ವಾಹನ ಸಮೇತ ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ಕೆಲಸದಾಕೆಯನ್ನು ವಿಚಾರಣೆಗೊಳಪಡಿಸಿದಾಗ, ಕೆಲಸದಾಕೆಯು ಕೆಲಸ ಮಾಡುವ ಸಮಯದಲ್ಲಿ ಮನೆಯ ಬೀಗವನ್ನು ಕಳ್ಳತನ ಮಾಡಿದ್ದು, ಆ ಬೀಗದಿಂದ ಮನೆಯ ಬಾಗಿಲನ್ನು ತೆರೆದು ಚಿನ್ನಾಭರಣಗಳನ್ನು ಕಳವು ಮಾಡಿ, ವಾಪಸ್ ಹೋಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾಳೆ.
ಕಳವು ಮಾಡಿದ ಚಿನ್ನಾಭರಣಗಳನ್ನು ದ್ವಿ-ಚಕ್ರ ವಾಹನದ ಡಿಕ್ಕಿಯಲ್ಲಿಟ್ಟಿರುವುದಾಗಿ ತಿಳಿಸಿದ್ದು, ಡಿಕ್ಕಿಯಲ್ಲಿದ್ದ 128 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು. ಇದರ ಮೌಲ್ಯ 12.00.000/-(ಹನ್ನೇರಡು ಲಕ್ಷ ರೂಪಾಯಿ). ದಿನಾಂಕ:
ಅದೇ ದಿನ ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ವೈಟ್ ಫೀಲ್ಡ್ ಡಾ:ಶಿವಕುಮಾರ್ ಗುಣಾರೇ, ಐಪಿಎಸ್ ಸಹಾಯಕ ಪೊಲೀಸ್ ಆಯುಕ್ತರು, ಮಾರತ್ ಹಳ್ಳಿ ಉಪ ವಿಭಾಗ ಶ್ರೀಮತಿ.ಪ್ರಿಯದರ್ಶಿನಿ ಈಶ್ವರ್ ಸಾಣೆಕೊಪ್ಪರವರ ಮಾರ್ಗದರ್ಶನದಲ್ಲಿ ಹೆಚ್.ಎ.ಎಲ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಅಜರುದ್ದೀನ್.ಎಂ.ಎಸ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿರವರ ತಂಡ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ









