ಸಿಲಿಕಾನ್ ಸಿಟಿಯಲ್ಲಿ ಮಾದಕ ದ್ರವ್ಯ ಜಾಲದ ವಿರುದ್ಧ ಸಮರ ಸಾರಿರುವ ಸಿಸಿಬಿ ಮತ್ತು ನಗರದ ವಿವಿಧ ಠಾಣಾ ಪೊಲೀಸರು ಅತಿದೊಡ್ಡ ಬೇಟೆಯಾಡಿದ್ದಾರೆ. ವಿವಿಧೆಡೆ ದಾಳಿ ನಡೆಸಿ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡಿದ್ದು, ಮೂವರು ವಿದೇಶಿಯರು ಸೇರಿದಂತೆ ಒಟ್ಟು 15 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರಲ್ಲಿ ಮೂವರು ವಿದೇಶಿ ಪ್ರಜೆಗಳು ಹಾಗೂ ಹೊರರಾಜ್ಯದ 12 ವ್ಯಕ್ತಿಗಳು ಸೇರಿದ್ದಾರೆ. ಇವರೆಲ್ಲರೂ ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ-ಬಿಟಿ ಉದ್ಯೋಗಿಗಳನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದರು.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ಸೇರಿದಂತೆ ಅಮೃತಹಳ್ಳಿ, ಹೆಬ್ಬಗೋಡಿ, ಜೆ.ಬಿ.ನಗರ, ಶೇಷಾದ್ರಿಪುರಂ, ಮಹಾಲಕ್ಷ್ಮೀ ಲೇಔಟ್ ಮತ್ತು ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ಈ ಮಿಂಚಿನ ದಾಳಿ ನಡೆಸಲಾಗಿದೆ.
9.4 ಕೆಜಿ ಹೈಡ್ರೋ ಗಾಂಜಾ ಮತ್ತು 30 ಕೆಜಿ ಸಾಮಾನ್ಯ ಗಾಂಜಾ.
5.6 ಕೆಜಿ ಎಂಡಿಎಂಎ (MDMA) ಹಾಗೂ 131 ಗ್ರಾಂ ಕೊಕೇನ್.
ಎಲ್ಎಸ್ಡಿ ಪಿಲ್ಸ್, ಎಲ್ಎಸ್ಡಿ ಸ್ಟ್ರಿಪ್ಸ್ ಮತ್ತು ಹ್ಯಾಶಿಷ್ ಆಯಿಲ್.

ವಶಪಡಿಸಿಕೊಂಡ ಮಾದಕ ವಸ್ತುಗಳ ಒಟ್ಟು ಮೌಲ್ಯ ಅಂದಾಜು 10.59 ಕೋಟಿ ರೂಪಾಯಿ ಆಗಿದ್ದು, ಇವುಗಳ ಮಾರುಕಟ್ಟೆ ಮೌಲ್ಯ ಸುಮಾರು 21.50 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಒಂದು ಕಾರು, ಬೈಕ್ ಮತ್ತು ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಈ ಕಾರ್ಯಾಚರಣೆಗಳನ್ನು ಉಪ ಪೊಲೀಸ್ ಆಯುಕ್ತರುಗಳಾದ ಅಪರಾಧ-02 ಶ್ರೀ. ರಾಜಾ ಇಮಾಮ್ ಕಾಸಿಂ. ಉತ್ತರ ಶ್ರೀ ಬಿ.ಎಸ್.ನೇಮಗೌಡ, ಐ.ಪಿ.ಎಸ್. ಕೇಂದ್ರ ಶ್ರೀ. ಅಕ್ಷಯ್. ಎಂ ಹಾಕೆ, ಐ.ಪಿ.ಎಸ್. ಪೂರ್ವ ಡಾ.ವಿಕ್ರಮ್ ಅಮಟೆ, ಐ.ಪಿ.ಎಸ್. ಈಶಾನ್ಯ, ಶ್ರೀ. ಜಿ.ಕೆ.ಮಿಥುನ್ ಕುಮಾರ್, ಐ.ಪಿ.ಎಸ್. ಎಲೆಕ್ಟ್ರಾನಿಕ್ಸಿಟಿ ವಿಭಾಗದ, ಶ್ರೀ. ಎಂ. ನಾರಾಯಣ್. ಐ.ಪಿ.ಎಸ್ ರವರುಗಳ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತರು ಗಳಾದ ಶ್ರೀ.ಮಹಾನಂದ. ಹೆಚ್.ಕೆ. ಶ್ರೀ.ಬಿ.ಆರ್.ವೇಣುಗೋಪಾಲ್, ಶ್ರೀ. ಬಿ.ರಾಮಚಂದ್ರ, ಶ್ರೀ. ಲಕ್ಷ್ಮೀಕಾಂತ್ ಕಾಂತ್ ಆರ್. ಶ್ರೀ. ರಂಗಪ್ಪ,ಟಿ ಶ್ರೀ. ಮುರುಗೇಂದ್ರಯ್ಯ, ಕೆ.ಎಂ. ಸತೀಶ್ ರವರುಗಳ ನೇತೃತ್ವದಲ್ಲಿ, ಪೊಲೀಸ್ ಇನ್ಸ್ಪೆಕ್ಟರ್ಗಳು ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಯವರುಗಳ ತಂಡ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









