ದಿನಾಂಕ 06.12.2024 ರಂದು ಬೆಳಿಗ್ಗೆ 7.00 ಗಂಟೆಸಮಯದಲ್ಲಿ ಪಿದ್ಯಾದಿ ಚಂದನ್ ಹೆಚ್ ಎಸ್ ತಂದೆ ಶೇಖರ ರವರು ವಿದ್ಯಾ ನಗರ ಠಾಣೆಗೆ ಹಾಜರಾಗಿ ದೂರು ನೀಡಿದ್ದು ತಾನು ಹಣ್ಣಿನ ವ್ಯಾಪಾರ ಮಾಡುತ್ತಿದ್ದು, ಈ ದಿನ ಬೆಳಿಗ್ಗೆ 6.00 ಗಂಟೆ ಸಮಯದಲ್ಲಿ ತನ್ನ ಬಾಬು KA05ML1728 ನೇ ನಂಬರಿನ ಟೊಯೋಟಾ ಪಾರ್ಚುನರ್ ಕಾರನ್ನು ಬಾಲಾಜಿ ಬಡಾವಣೆ ಶಿವಗಂಗಾ ಕನ್ವೆನ್ನನ್ ಹಾಲ್ ಹತ್ತಿರ ಇರುವ ತನ್ನ ಸೆಲ್ಲರ್ ಇರುವ ಬಿಲ್ಲಿಂಗ್ ಮುಂಬಾಗ ನಿಲ್ಲಿಸಿ ಕಾರಿಗೆ ಹಣ್ಣಿನ ಟ್ರೇಗಳನ್ನು ತುಂಬಲು ತಮ್ಮ ಅಂಗಡಿ ಕೆಲಸ ಮಾಡುವ ಹುಡುಗನಿಗೆ ಹೇಳಿ ಮನೆಗೆ ಸ್ನಾನಕ್ಕೆಂದು ಹೋಗಿದ್ದಾಗ ಯಾರೋ ಇಬ್ಬರು ಕಳ್ಳರು ಬೈಕಿನಲ್ಲಿ ಬಂದು ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿಕೊಡಿ ಅಂತ ನೀಡಿದ ದೂರಿನ ಮೇರೆಗೆ ಠಾಣಾ ಗುನ್ನೆ 270/2024 ಕಲಂ 303(2) ಬಿ ಎನ್ ಎಸ್ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ, ಎಂ. ಸಂತೋಷ್, ಶ್ರೀ ಎಂ. ಮಂಜುನಾಥ,ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಮಲ್ಲೇಶ್ ದೊಡ್ಡಮನಿ ಮತ್ತು ವಿದ್ಯಾನಗರ ಠಾಣೆ ನಿರೀಕ್ಷಕರಾದ ಶ್ರೀಮತಿ ಶಿಲ್ಪಾ ವೈ.ಎಸ್ ರವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ವಿಶ್ವನಾಥ ಜಿ.ಎನ್ ವಿಜಯ ಎಮ್ ಪಿಎಸ್ಐ ಹಾಗು ಸಿಬ್ಬಂದಿಗಳು ಒಳಗೊಂಡ ತಂಡವು ಆರೋಪಿತನಾದ ಪತೇಹ್ ಅಹಮದ್ @ ಪತ್ತೆ ಪೈಲ್ವಾನ್, 30 ವರ್ಷ, ದಾವಣಗೆರೆ ಇತನನ್ನು ಹರಿಹರ ನಗರದಲ್ಲಿ ಬಂಧಿಸಿದ್ದು, ಆರೋಪಿತನಿಂದ ಅಂದಾಜು 10 ಲಕ್ಷ ನಂಬರಿನ ಟೊಯೋಟಾ ಪಾರ್ಚುನರ್ ಕಾರನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಸದರಿ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಪತ್ತೆಯಾಗಲು ಬಾಕಿ ಇರುತ್ತದೆ.
KA05ML1728
ಸದರಿ ಆರೋಪಿತನಾದ ಪತೇಹ್ ಅಹಮದ್ @ ಪತ್ತೆ ಪೈಲ್ವಾನ್ ಈತನು ಕಾರನ್ನು ಕದ್ದು ತೆಗೆದುಕೊಂಡು ಹೋಗಿ ಹರಿಹರ ನಗರದ ಕೋಟೆ ಆಂಜನೇಯ ದೇವಾಸ್ಥಾನದ ಬಗ್ಗೆ ಚರ್ಚ್ ರಸ್ತೆಯಲ್ಲಿ ಬೈಕ್ ಗೆ ಅಪಘಾತ ಪಡಿಸಿರುತ್ತಾನೆ. ಈ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿತನ ಹಿನ್ನಲೆ: ಸದರಿ ಆರೋಪಿತನಾದ ಪತೇಹ್ ಅಹಮದ್ @ ಪತ್ತೆ ಪೈಲ್ವಾನ್ ಈತನ ಮೇಲೆ ಈ ಹಿಂದೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 172/23 ಐಪಿಸಿ 307 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ
ಸದರಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಮೇಲ್ಕಂಡ ಅಧಿಕಾರಿಗಳು ಸ್ಥೆರಿದಂತೆ ಸಿಬ್ಬಂದಿಗಳಾದ ಸಿಬ್ಬಂದಿಗಳಾದ ಶಂಕರ್ ಜಾದವ್, ಆನಂದ ಎಮ್, ಬೋಜಪ್ಪ, ಚಂದ್ರಪ್ಪ, ಗೋಪಿನಾಥ ನಾಯ್ಕ, ಬಸವರಾಜ್, ಅಮೃತ್ ಕೆ ಹೆಚ್, ನವೀನ್ ಮಲ್ಲನಗೌಡ, ಮಾರಪ್ಪ & ಕೊಟ್ರೇಶ ಹಾಗು ಸ್ಮಾರ್ಟ ಸಿಟಿ ಕಛೇರಿಯ ಸಿಬ್ಬಂದಿಗಳಾದ ಮಾರುತಿ, ಸೋಮು ಹಾಗು ರಾಘವೇಂದ್ರ ರವರುಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಪ್ರಶಂಸಿಸರುತ್ತಾರೆ.









