ಬೆಂಗಳೂರಿನ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಮಾರಕಾಸ್ತ್ರಗಳನ್ನು ಹೊಂದಿದ್ದ ಇಬ್ಬರು ರೌಡಿ ಶೀಟರ್ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
02 ಪಿಸ್ತೂಲ್ಗಳು ಮತ್ತು 03 ಜೀವಂತ ಗುಂಡುಗಳು.
ಬೆಂಗಳೂರಿನ ಹೆಚ್.ಎ.ಎಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಮತ್ತು ಆತನಿಗೆ ಪಿಸ್ತೂಲ್ ಪೂರೈಸಿದ್ದ ಹೊರರಾಜ್ಯದ ಮತ್ತೊಬ್ಬ ರೌಡಿ ಶೀಟರ್.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪಾರ್ಟ್ಮೆಂಟ್ವೊಂದರ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಹೆಚ್.ಎ.ಎಲ್ ಠಾಣೆಯ ರೌಡಿ ಶೀಟರ್ ಕಳೆದ 7 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಈಗಾಗಲೇ 4 ವಾರೆಂಟ್ಗಳು ಹೊರಬಿದ್ದಿದ್ದವು. ವಿಚಾರಣೆಯ ವೇಳೆ, ಈತನಿಗೆ ಪಿಸ್ತೂಲ್ ಪೂರೈಸಿದ ವ್ಯಕ್ತಿ ಮೈಸೂರಿನ ಉದಯಗಿರಿ ಠಾಣೆಯ ರೌಡಿ ಶೀಟರ್ ಎಂದು ತಿಳಿದುಬಂದಿದೆ. ಆತನ ವಿರುದ್ಧವೂ ಮೈಸೂರಿನ ವಿವಿಧ ನ್ಯಾಯಾಲಯಗಳಲ್ಲಿ 7 ವಾರೆಂಟ್ಗಳು ಇದ್ದು, ಕಳೆದ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಈ ಕಾರ್ಯಾಚರಣೆಯನ್ನು ಶ್ರೀ.ಅಜಯ್ ಹಿಲೋರಿ, ಐಪಿಎಸ್, ಅಪರ ಪೊಲೀಸ್ ಆಯುಕ್ತರು, ಅಪರಾಧ ರವರ ಮಾರ್ಗದರ್ಶನದಲ್ಲಿ, ಶ್ರೀ.ಶ್ರೀಹರಿಬಾಬು.ಬಿ.ಎಲ್, ಐಪಿಎಸ್, ಉಪ ಪೊಲೀಸ್ ಆಯುಕ್ತರು, ಅಪರಾಧ-1 ರವರ ನೇತೃತ್ವದಲ್ಲಿ, ಸಿಸಿಬಿಯ ಸಂಘಟಿತ ಅಪರಾಧ ದಳ(ಪೂರ್ವ) ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಸಿ.ಎಸ್.ಆನಂದ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ರವರುಗಳಾದ ಶ್ರೀ.ಆರ್.ರಮೇಶ್, ಶ್ರೀ.ಸುರೇಶ್.ಪಿ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









